‘ನನ್ನ ಬಗ್ಗೆ ಸಾವಿರ ಹೇಳ್ತಾರೆ’; ಟ್ರೋಲ್ ಮಾಡುವವರಿಗೆ ದಿವ್ಯಾ ಉರುಡುಗ ತಿರುಗೇಟು

ದಿವ್ಯಾ ಬಿಗ್​ ಬಾಸ್​ ಮನೆಯಲ್ಲಿ ಆಟ ಆಡುವಾಗ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ಕೈಗೆ ಬ್ಯಾಂಡೇಜ್​ ಹಾಕಿಕೊಂಡಿದ್ದರು. ದಿವ್ಯಾ ಮೇಲೆ ಸಿಂಪತಿ ಬರೋಕೆ ಇದು ಕಾರಣವಾಗಿತ್ತು ಎಂದು ಅನೇಕರು ಮಾತನಾಡಿದ್ದರು.

‘ನನ್ನ ಬಗ್ಗೆ ಸಾವಿರ ಹೇಳ್ತಾರೆ’; ಟ್ರೋಲ್ ಮಾಡುವವರಿಗೆ ದಿವ್ಯಾ ಉರುಡುಗ ತಿರುಗೇಟು
| Updated By: ರಾಜೇಶ್ ದುಗ್ಗುಮನೆ

Updated on: Aug 11, 2021 | 5:14 PM

ದಿವ್ಯಾ ಉರುಡುಗ ಬಿಗ್​ ಬಾಸ್​ ಟಾಪ್​ ಮೂರರಲ್ಲಿ ಕಾಣಿಸಿಕೊಂಡಿದ್ದರು. ಅವರ ಜತೆ ರೇಸ್​ನಲ್ಲಿದ್ದ ವೈಷ್ಣವಿ ಗೌಡ ಅವರನ್ನು ಕೂಡ  ದಿವ್ಯಾ ಉರುಡುಗ ಹಿಂದಿಕ್ಕಿದ್ದರು. ಎರಡನೇ ರನ್ನರ್​ ಅಪ್​ ಆಗಿ ದಿವ್ಯಾ ಹೊರ ಹೊಮ್ಮಿದ್ದಾರೆ.

ದಿವ್ಯಾ ಬಿಗ್​ ಬಾಸ್​ ಮನೆಯಲ್ಲಿ ಆಟ ಆಡುವಾಗ ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ಕೈಗೆ ಬ್ಯಾಂಡೇಜ್​ ಹಾಕಿಕೊಂಡಿದ್ದರು. ದಿವ್ಯಾ ಮೇಲೆ ಸಿಂಪತಿ ಬರೋಕೆ ಇದು ಕಾರಣವಾಗಿತ್ತು ಎಂದು ಅನೇಕರು ಮಾತನಾಡಿದ್ದರು. ಈ ವಿಚಾರ ಇಟ್ಟುಕೊಂಡು ಕೆಲವರು ಟ್ರೋಲ್​ ಕೂಡ ಮಾಡಿದ್ದರು. ಈ ಬಗ್ಗೆ ದಿವ್ಯಾ ಉರುಡುಗ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಜನರು ಸಾವಿರ ಮಾತನಾಡುತ್ತಾರೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ ಆಶೀರ್ವಾದ ಪಡೆದ ಮಂಜು ಪಾವಗಡ; ಇಲ್ಲಿವೆ ಫೋಟೋಗಳು

BBK8 Finale: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಾನು, ಅರವಿಂದ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು; ಭಾವುಕರಾದ ದಿವ್ಯಾ ಉರುಡುಗ

Follow us