AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಆದರೆ ಸಿಎಂ ಕುರ್ಚಿಗಾಗಿ ಶಿವಕುಮಾರ್ ದುಡುಕುವುದು ಬೇಡ: ವಿ ಸೋಮಣ್ಣ

ಪ್ರಜ್ವಲ್ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಆದರೆ ಸಿಎಂ ಕುರ್ಚಿಗಾಗಿ ಶಿವಕುಮಾರ್ ದುಡುಕುವುದು ಬೇಡ: ವಿ ಸೋಮಣ್ಣ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 09, 2024 | 11:41 AM

ಶಿವಕುಮಾರ್ ಅವರಿಗೆ ಕಿವಿಮಾತನ್ನು ಹೇಳಿದ ಸೋಮಣ್ಣ, ಮುಖ್ಯಮಂತ್ರಿಯಾಗುವ ಅಸೆಗಾಗಿ ದುಡುಕುವುದು ಬೇಡ, ಆತುರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತವೆ, ಅವರು ಎಲ್ಲ ಕುರ್ಚಿಗಳ ಮೇಲೆ ಕೂತಾಗಿದೆ, ಒಂದು ಮಾತ್ರ ಬಾಕಿಯಿದೆ, ಅವರು ಸಿಎಂ ಆಗಲಿ ಅಂತ ನಾನೂ ಅಂದುಕೊಂಡಿದ್ದೆ ಅದರೆ ಅದನ್ನು ಪಡೆಯಲು ದುಡುಕುವುದು ಬೇಡ ಎಂದರು.

ಬೆಂಗಳೂರು: ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮತಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ (V Somanna) ಅವರು ಅಶ್ಲೀಲ ವಿಡಿಯೋಗಳ ಪ್ರಕರಣಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಖಡಕ್ಕಾಗಿ ಮಾತಾಡಿ ಅವನಿಂದ ತಪ್ಪಾಗಿರುವುದು ನಿಜವಾದರೆ ಗಲ್ಲಿಗೇರಿಸಲಿ ಎಂದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಬಗ್ಗೆ ಭಕ್ತಿ, ಶ್ರದ್ಧೆ ಮತ್ತು ಅಭಿಮಾನದಿಂದ ಮಾತಾಡಿದ ಅವರು ತಾವು, ಸಿದ್ದರಾಮಯ್ಯ, ಸಿಂಧ್ಯಾ  ಮೊದಲಾದವರೆಲ್ಲ ಸಂಸ್ಕಾರವನ್ನು ಕಲಿತಿದ್ದೇ ಅವರಿಂದ ಎಂದರು. ಪ್ರಜ್ವಲ್ ಅವರ ಮೊಮ್ಮಗನಾಗಿರುವ ಕಾರಣಕ್ಕೆ ರಿಯಾಯಿತಿ ತೋರುವ ಅವಶ್ಯಕತೆ ಇಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಸೋಮಣ್ಣ ಹೇಳಿದರು. ಶಿವಕುಮಾರ್ ಅವರಿಗೆ ಕಿವಿಮಾತನ್ನು ಹೇಳಿದ ಸೋಮಣ್ಣ, ಮುಖ್ಯಮಂತ್ರಿಯಾಗುವ ಅಸೆಗಾಗಿ ದುಡುಕುವುದು ಬೇಡ, ಆತುರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತವೆ, ಅವರು ಎಲ್ಲ ಕುರ್ಚಿಗಳ ಮೇಲೆ ಕೂತಾಗಿದೆ, ಒಂದು ಮಾತ್ರ ಬಾಕಿಯಿದೆ, ಅವರು ಸಿಎಂ ಆಗಲಿ ಅಂತ ನಾನೂ ಅಂದುಕೊಂಡಿದ್ದೆ ಅದರೆ ಅದನ್ನು ಪಡೆಯಲು ದುಡುಕುವುದು ಬೇಡ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರೀತಂ ಗೌಡ ಇನ್ನೂ ಚಿಕ್ಕ ಹುಡುಗ, ರಾಜಕೀಯವಾಗಿ ಪ್ರಬುದ್ಧನಲ್ಲ: ವಿ ಸೋಮಣ್ಣ, ಬಿಜೆಪಿ ನಾಯಕ