ನಾಮಪತ್ರ ಸಲ್ಲಿಸುವ ಮೊದಲು ಪೊಲೀಸರೊಂದಿಗೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಕಿರಿಕ್!

ನಾಮಪತ್ರ ಸಲ್ಲಿಸುವ ಮೊದಲು ಪೊಲೀಸರೊಂದಿಗೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಕಿರಿಕ್!
|

Updated on: Apr 03, 2024 | 4:36 PM

ಅವರ ಕೂಗಾಟದಿಂದ ತಾಳ್ಮೆ ಕಳೆದುಕೊಂಡ ಚಂದ್ರಶೇಖರ್ ಐದಕ್ಕಿಂತ ಹೆಚ್ಚು ಜನರನ್ನು ಒಳಗಡೆ ಕಳಿಸಬಾರದೆಂದು ಆದೇಶವಿದೆ ಅದನ್ನು ಪಾಲಿಸುತ್ತಿದ್ದೇವೆ, ಇದರಲ್ಲಿ ತಮಾಷೆ ಎಂಥದ್ದೂ ಇಲ್ಲ ಎಂದರು. ನಂತರ ವಿಷಯ ಮನವರಿಕೆ ಮಾಡಿಕೊಂಡ ಸೋಮಣ್ಣ ಐವರೊಂದಿಗೆ ಒಳಗಡೆ ಹೋಗಿ ನಾಮಪತ್ರ ಸಲ್ಲಿಸಿದರು.

ತುಮಕೂರು: ಪೊಲೀಸ್ (police) ಮತ್ತು ಜನಪ್ರತಿನಿಧಿಗಳ ನಡುವೆ ನಡೆಯುವ ತಿಕ್ಕಾಟಗಳು ಅಪರೂಪವೇನಲ್ಲ. ಆದರೆ ವಿ ಸೋಮಣ್ಣ (V Somanna) ಅವರಂಥ ಹಿರಿಯ ಮತ್ತು ಸಜ್ಜನ ರಾಜಕಾರಣಿ ಪೊಲೀಸರ ಜೊತೆ ವಾಗ್ವಾದಕ್ಕಿಳಿಯುವುದು ಖಂಡಿತವಾಗಿಯೂ ಅಪರೂಪವೇ. ಅಸಲಿಗೆ ನಡೆದಿದ್ದೇನೆಂದರೆ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ (DC office) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಹೋದಾಗ ತುಮಕೂರು ಡಿವೈಎಸ್ ಪಿ ನೇತೃತ್ವದ ಪೊಲೀಸ್ ತಂಡ ಅವರನ್ನು ತಡೆದು ಅಭ್ಯರ್ಥಿ ಸೇರಿ ಐದು ಜನಕ್ಕಿಂತ ಜಾಸ್ತಿ ಒಳಗಡೆ ಹೋಗುವಂತಿಲ್ಲ ಎಂದು ತಿಳಿಸಿತು. ಅಷ್ಟಕ್ಕೆ ಕೋಪಾವಿಷ್ಟರಾದ ಸೋಮಣ್ಣ ಏನು ತಮಾಷೆ ಮಾಡುತ್ತಿದ್ದೀರಾ ಅನ್ನುತ್ತಾ ಪೊಲೀಸರ ಮೇಲೆ ರೇಗಾಡತೊಡಗಿದರು. ಅವರ ಕೂಗಾಟದಿಂದ ತಾಳ್ಮೆ ಕಳೆದುಕೊಂಡ ಚಂದ್ರಶೇಖರ್ ಐದಕ್ಕಿಂತ ಹೆಚ್ಚು ಜನರನ್ನು ಒಳಗಡೆ ಕಳಿಸಬಾರದೆಂದು ಆದೇಶವಿದೆ ಅದನ್ನು ಪಾಲಿಸುತ್ತಿದ್ದೇವೆ, ಇದರಲ್ಲಿ ತಮಾಷೆ ಎಂಥದ್ದೂ ಇಲ್ಲ ಎಂದರು. ನಂತರ ವಿಷಯ ಮನವರಿಕೆ ಮಾಡಿಕೊಂಡ ಸೋಮಣ್ಣ ಐವರೊಂದಿಗೆ ಒಳಗಡೆ ಹೋಗಿ ನಾಮಪತ್ರ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಮಕೂರು ಬಿಜೆಪಿ ಟಿಕೆಟ್​ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ