ಮಂಗಳವಾರ ದೆಹಲಿಯಲ್ಲಿ ಕುಮಾರಸ್ವಾಮಿ ಜೊತೆ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್!
ನಿನ್ನೆ ರಾತ್ರಿ ಜೊತೆಯಾಗಿ ಊಟ ಮಾಡಿದ ಬಳಿಕ ಸತೀಶ್ ಜಾರಕಿಹೊಳಿ ಇಂದು ಪಾರ್ಲಿಮೆಂಟ್ ಕಚೇರಿಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರೆಂದು ನಮ್ಮ ದೆಹಲಿ ವರದಿಗಾರ ಹೇಳುತ್ತಾರೆ. ಕೆಎನ್ ರಾಜಣ್ಣ ಪ್ರಸ್ತಾಪಿಸಿರುವ ಹನಿ ಟ್ರ್ಯಾಪ್ ವಿಷಯವನ್ನು ಸತೀಶ್ ಗಂಭಿರವಾಗಿ ಪರಿಗಣಿಸಿದ್ದು ಅದನ್ನು ಮೊನ್ನೆ ಎಐಸಿಸಿ ನಾಯಕರ ಜೊತೆ ಕೂಡ ಚರ್ಚಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನೆಲ್ಲ ನಡೆಯುತ್ತಿದೆಯೋ?
ಬೆಂಗಳೂರು, ಮಾರ್ಚ್ 26: ದುಶ್ಮನ್ ಕಾ ದುಶ್ಮನ್ ದೋಸ್ತ್ ಅಂತ ಹಿಂದಿಯಲ್ಲಿ ಗಾದೆ ಮಾತೊಂದಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ನಿನ್ನೆ ರಾತ್ರಿ ದೆಹಲಿಯಲ್ಲಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದೂ ಅಲ್ಲದೆ ಜೊತೆಯಾಗಿ ಡಿನ್ನರ್ ಕೂಡ ಮಾಡಿದ್ದಾರೆ. ಡಿನ್ನರ್ಗೆ ಆಹ್ವಾನ ನೀಡಿದ್ದು ಕುಮಾರಸ್ವಾಮಿಯವರಂತೆ. ಅವರಿಬ್ಬರು ಜೊತೆಯಾಗಿ ಕುಳಿತು ಮಾತಾಡುತ್ತಿರುವ ಫೋಟೋ ಟಿವಿ9ಗೆ ಲಭ್ಯವಾಗಿವೆ. ರಾಜ್ಯ ರಾಜಕೀಯದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ಆರೋಪ: ನೋಟಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕುಮಾರಸ್ವಾಮಿ
Loading...
Unable to load recommendations.
Follow Us