AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಪಘಾತದಲ್ಲಿ 6 ಜನ ಸಾವು; ಮೃತರ ಮಕ್ಕಳಿಗೆ ಪ್ರದೀಪ್ ಈಶ್ವರ್ ಸಾಂತ್ವನ

ರಸ್ತೆ ಅಪಘಾತದಲ್ಲಿ 6 ಜನ ಸಾವು; ಮೃತರ ಮಕ್ಕಳಿಗೆ ಪ್ರದೀಪ್ ಈಶ್ವರ್ ಸಾಂತ್ವನ

ಕಿರಣ್ ಹನುಮಂತ್​ ಮಾದಾರ್
|

Updated on: May 26, 2024 | 6:24 PM

Share

ಹಾಸನದ ಬಳಿ ಕಾರು ಅಪಘಾತದಲ್ಲಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಹಳ್ಳಿಯ ಮೃತ ರವಿಕುಮಾರ್  ಹಾಗೂ ನೇತ್ರಾ ದಂಪತಿಯ ಮಕ್ಕಳನ್ನು ಶಾಸಕ ಪ್ರದೀಪ್ ಈಶ್ವರ್ ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ವೇಳೆ ಅನಾಥರಾದ ಬಾಲಕಿಯರನ್ನು ಕಂಡು ಪ್ರದೀಪ್ ಈಶ್ವರ್ ಕಣ್ಣೀರಾಕಿದರು.

ಚಿಕ್ಕಬಳ್ಳಾಪುರ, ಮೇ.26: ಹಾಸನದ ಬಳಿ ಕಾರು ಅಪಘಾತದಲ್ಲಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಚಿಗಟೇನಹಳ್ಳಿಯ ಮೃತ ರವಿಕುಮಾರ್  ಹಾಗೂ ನೇತ್ರಾ ದಂಪತಿಯ ಮಕ್ಕಳನ್ನು ಶಾಸಕ ಪ್ರದೀಪ್ ಈಶ್ವರ್(Pradeep Eshwar) ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ವೇಳೆ ಅನಾಥರಾದ ಬಾಲಕಿಯರನ್ನು ಕಂಡು ಪ್ರದೀಪ್ ಈಶ್ವರ್ ಕಣ್ಣೀರಾಕಿದರು. ತಂದೆ-ತಾಯಿ ಕಳೆದುಕೊಂಡು ಇಬ್ಬರು ಬಾಲಕಿಯರು ಅನಾಥರಾಗಿದ್ದು,  ಅಜ್ಜಿಯ ಮನೆಯಲ್ಲಿದ್ದಾರೆ. ಇನ್ನು ಕೂಡಲೇ ಆ ಇಬ್ಬರ ಬಾಲಕಿಯರ ಹೆಸರಿನಲ್ಲಿ ತಲಾ 1 ಲಕ್ಷ ರೂಪಾಯಿ ಪೋಸ್ಟಲ್ ಡೆಪಾಸಿಟ್ ಜೊತೆಗೆ ಉಚಿತ ವಿದ್ಯಾಭ್ಯಾಸ ಕೊಡಿಸುವುದಾಗಿ ಪ್ರದೀಪ್ ಈಶ್ವರ್ ಭರವಸೆ ನೀಡಿದ್ದಾರೆ.

ಬಾಲ್ಯದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ಪರಿಸ್ಥಿತಿ ನೆನೆದ ಶಾಸಕ

ಇನ್ನು ಈ ವೇಳೆ ಬಾಲ್ಯದಲ್ಲಿ ತಾನೂ ಕೂಡ ಅಪಘಾತದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ತಮ್ಮ ಪರಿಸ್ಥಿತಿಯನ್ನು ನೆನೆದು ಶಾಸಕರು ದುಃಖತಪ್ತರಾದರು. ‘ನಾನು ಅನಾಥವಾದಾಗ ಪ್ರದೀಪ್ ಈಶ್ವರ್ ಇರಲಿಲ್ಲ, ಈಗ ನಿಮ್ಮ ಜೊತೆ ಪ್ರದೀಪ್ ಈಶ್ವರ್ ಇರುತ್ತೇನೆ ಎಂದು ಅಭಯ ನೀಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us