ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ಶೋ ರೂಮ್​ನವರು ಹಳೆ ಬೈಕ್​ಗೆ ಬಣ್ಣ ಬಳಿದು ರೈತನಿಗೆ ಕೊಟ್ಟರಾ ಎಂಬ ಅನುಮಾನ ಮೂಡಿದೆ. ಹೌದು, ತುಮಕೂರು(Tumakuru) ನಗರದ ಸಾಯಿ ಹೀರೋ ಶೋ ರೂಮ್​ನವರು ಮೋಸ ಮಾಡಿದ್ದೇರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ರೈತ ಶೋ ರೂಮ್ ಗೆ ತೆರಳಿ‌ ಸಿಬ್ಬಂದಿಯ ಮೇಲೆ ಜಗಳ ಮಾಡಿದ್ದಾರೆ.

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
|

Updated on:Sep 19, 2024 | 10:27 PM

ತುಮಕೂರು, ಸೆ.19: ಶೋ ರೂಮ್​ನವರು ಹಳೆ ಬೈಕ್​ಗೆ ಬಣ್ಣ ಬಳಿದು ರೈತನಿಗೆ ಕೊಟ್ಟರಾ ಎಂಬ ಅನುಮಾನ ಮೂಡಿದೆ. ಹೌದು, ತುಮಕೂರು(Tumakuru) ನಗರದ ಸಾಯಿ ಹೀರೋ ಶೋ ರೂಮ್​ನವರು ಮೋಸ ಮಾಡಿದ್ದೇರೆಂಬ ಆರೋಪ ಕೇಳಿಬಂದಿದೆ. ನಗರದ‌ ಶಿರಾ ಗೇಟ್‌ನಲ್ಲಿರುವ ಸಾಯಿ ಹೀರೋ ಬೈಕ್ ಶೋರೂಮ್​ನಲ್ಲಿ ರೈತ ಅನಂತಕುಮಾರ್ ಎಂಬುವವರು 1,11,000 ರೂ. ಬೆಲೆಯ ಸೂಪರ್ ಸ್ಪೆಂಡರ್ ಹೊಸ ಬೈಕನ್ನ ಖರೀದಿ ಮಾಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಇದು ಬಳಕೆ ಮಾಡಿದ ಬೈಕ್​ ಎಂದು ಗೊತ್ತಾಗಿದೆ. ಇದೀಗ ಹೊಸ ಬೈಕ್ ಬದಲಿಗೆ ಹಳೆ ಬೈಕ್ ಕೊಟ್ಟಿದ್ದಾರೆಂದು ಆರೋಪಿಸಿ, ರೈತ ಶೋ ರೂಮ್ ಗೆ ತೆರಳಿ‌ ಸಿಬ್ಬಂದಿಯ ಮೇಲೆ ಜಗಳ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Thu, 19 September 24

Follow us