ರಜೆ ಕ್ಯಾನ್ಸಲ್​ ಮಾಡಿ ದೇಶ ಸೇವೆಗೆ ತೆರಳಿದ ಹಾವೇರಿಯ ಯೋಧರು: ಭಾವುಕ ಕ್ಷಣ

ದೇಶಸೇವೆ ಬಂತು ಅಂದ್ರೆ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡೋದಕ್ಕೆ ಸಿದ್ಧರಾಗುತ್ತಾರೆ. ದೇಶ ಸೇವೆಗೋಸ್ಕರ ಕುಟುಂಬ, ಸ್ನೇಹಿತರನ್ನು ಕೂಡ ಬಿಟ್ಟು ಹೊರಡೋಕೆ ರೆಡಿ ಆಗ್ತಾರೆ. ನಮ್ಮ ದೇಶದ ಹೆಮ್ಮೆಯೇ ಸೈನಿಕರು. ಇದಕ್ಕೆ ಸಾಕ್ಷಿ ಎಂಬಂತೆ ರಜೆಗೆಂದು ಊರಿಗೆ ಬಂದಿದ್ದ ಹಾವೇರಿ ಯೋಧರು ವದೇಶಸೇವೆಗಾಗಿ ಮರಳಿದ್ದಾರೆ.

ಹಾವೇರಿ, (ಮೇ 11): ದೇಶಸೇವೆ ಬಂತು ಅಂದ್ರೆ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡೋದಕ್ಕೆ ಸಿದ್ಧರಾಗುತ್ತಾರೆ. ದೇಶ ಸೇವೆಗೋಸ್ಕರ ಕುಟುಂಬ, ಸ್ನೇಹಿತರನ್ನು ಕೂಡ ಬಿಟ್ಟು ಹೊರಡೋಕೆ ರೆಡಿ ಆಗ್ತಾರೆ. ನಮ್ಮ ದೇಶದ ಹೆಮ್ಮೆಯೇ ಸೈನಿಕರು. ಇದಕ್ಕೆ ಸಾಕ್ಷಿ ಎಂಬಂತೆ ರಜೆಗೆಂದು ಊರಿಗೆ ಬಂದಿದ್ದ ಹಾವೇರಿ ಯೋಧರು ವದೇಶಸೇವೆಗಾಗಿ ಮರಳಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ನಡುವೆ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕೂಡಲೇ ಕರ್ತವ್ಯ ಹಾಜರಾಗುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇದರ ಬೆನ್ನಲ್ಲೆ ರಜೆಗೆಂದು ಬಂದ ಎರಡನೇ ದಿನದಲ್ಲಿ ಹಾವೇರಿಯ ಯೋಧರ ವಾಪಸ್​ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದು, ಅವರನ್ನು ಕುಟುಂಬಸ್ಥರು ಸೇರಿದಂತೆ ಸ್ಥಳೀಯರು ಬಿಳ್ಕೊಟ್ಟರು.

Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us