AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?

Daily Devotional: ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?

ಭಾವನಾ ಹೆಗಡೆ
|

Updated on: May 09, 2026 | 6:45 AM

Share

ಬೋಳು ತಲೆ ಇದ್ದವರಿಗೆ ಅದೃಷ್ಟ ಯಾವ ರೀತಿ ಇರಲಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವೈಜ್ಞಾನಿಕವಾಗಿ, ಆಹಾರ ಪದ್ಧತಿ, ವಾಸಿಸುವ ಸ್ಥಳ, ಮತ್ತು ಅನುವಂಶೀಯತೆ (ಹೆರಿಡಿಟ್ರಿ) ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಾಗಿವೆ. ಆದರೆ ಜ್ಯೋತಿಷ್ಯದ ಪ್ರಕಾರ, ರವಿ, ಮಂಗಳ ಮತ್ತು ಕೇತು ಗ್ರಹಗಳ ಪ್ರಭಾವ ಅಥವಾ ಅವುಗಳ ನೀಚ ದೃಷ್ಟಿಯು ಬೋಳುತಲೆಗೆ ಕಾರಣವಾಗಬಹುದು. ಜಾತಕದಲ್ಲಿ ಮೊದಲನೇ ಮನೆಯಾದ ಶಿರಸ್ಸಿಗೆ ಸಂಬಂಧಿಸಿದಂತೆ ಈ ಗ್ರಹಗಳ ಸ್ಥಾನಗಳು ಮಹತ್ವಪೂರ್ಣವಾಗಿವೆ.

ಬೋಳು ತಲೆ ಇದ್ದವರಿಗೆ ಅದೃಷ್ಟ ಯಾವ ರೀತಿ ಇರಲಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವೈಜ್ಞಾನಿಕವಾಗಿ, ಆಹಾರ ಪದ್ಧತಿ, ವಾಸಿಸುವ ಸ್ಥಳ, ಮತ್ತು ಅನುವಂಶೀಯತೆ (ಹೆರಿಡಿಟ್ರಿ) ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಾಗಿವೆ. ಆದರೆ ಜ್ಯೋತಿಷ್ಯದ ಪ್ರಕಾರ, ರವಿ, ಮಂಗಳ ಮತ್ತು ಕೇತು ಗ್ರಹಗಳ ಪ್ರಭಾವ ಅಥವಾ ಅವುಗಳ ನೀಚ ದೃಷ್ಟಿಯು ಬೋಳುತಲೆಗೆ ಕಾರಣವಾಗಬಹುದು. ಜಾತಕದಲ್ಲಿ ಮೊದಲನೇ ಮನೆಯಾದ ಶಿರಸ್ಸಿಗೆ ಸಂಬಂಧಿಸಿದಂತೆ ಈ ಗ್ರಹಗಳ ಸ್ಥಾನಗಳು ಮಹತ್ವಪೂರ್ಣವಾಗಿವೆ.

ಆಧ್ಯಾತ್ಮಿಕವಾಗಿ, ಬೋಳುತಲೆಯನ್ನು ಸೂರ್ಯ ಗ್ರಹದ (ರವಿ ಗ್ರಹ) ಪ್ರಭಾವ ಹೆಚ್ಚಾದ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯಲ್ಲಿ ಅಪಾರ ಜ್ಞಾನ, ಬುದ್ಧಿಶಕ್ತಿ, ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಬೋಳುತಲೆ ಹೊಂದಿದವರು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವುದನ್ನು ಇತಿಹಾಸದಲ್ಲಿ ಕಾಣಬಹುದು. ಕೃತಕ ವಿಧಾನಗಳಿಂದ ಬೋಳುತಲೆಯನ್ನು ಮರೆಮಾಚುವುದು ಈ ಶುಭ ಅದೃಷ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಬೋಳುತಲೆ ಹೊಂದಿದ ವ್ಯಕ್ತಿಗಳಲ್ಲಿ ವಾಕ್ ಶಕ್ತಿ, ಆಲೋಚನಾ ಶಕ್ತಿ ಮತ್ತು ಪ್ರಬುದ್ಧತೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Follow Us