ಜೈಲಿನಲ್ಲಿ ಬೀಡಿ, ಸಿಗರೇಟ್​ಗೆ ಅವಕಾಶ ಇರುತ್ತಾ? ನಿವೃತ್ತ ಪೊಲೀಸ್ ಅಧಿಕಾರಿ ತೆರೆದಿಟ್ಟ ಸತ್ಯ

ವೈರಲ್​ ಆಗಿರುವ ದರ್ಶನ್ ಅವರ ಫೋಟೋವನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜೈಲಿನ ಒಳಗೆ ರೌಡಿಶೀಟರ್​ಗಳ ಜೊತೆ ಕುಳಿತ ದರ್ಶನ್​ ಆರಾಮಾಗಿ ಟೀ ಕುಡಿದು, ಸಿಗರೇಟ್​ ಸೀದುತ್ತಾ ಕಾಲ ಕಳೆಯುತ್ತಿದ್ದಾರೆ. ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಅವರು ಅಲ್ಲಿ ಬಿಂದಾಸ್​ ಜೀವನ ಸಾಗಿಸುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಈ ಫೋಟೋ ವೈರಲ್​ ಆಗಿದೆ.

ಜೈಲಿನಲ್ಲಿ ಬೀಡಿ, ಸಿಗರೇಟ್​ಗೆ ಅವಕಾಶ ಇರುತ್ತಾ? ನಿವೃತ್ತ ಪೊಲೀಸ್ ಅಧಿಕಾರಿ ತೆರೆದಿಟ್ಟ ಸತ್ಯ
| Updated By: ಮದನ್​ ಕುಮಾರ್​

Updated on: Aug 25, 2024 | 6:39 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್​ ಹಾಗೂ ನಟೋರಿಯಸ್​ ರೌಡಿಗಳಾದ ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ ಮುಂತಾದವರು ಜೈಲಿನೊಳಗೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಅವರು ಒಟ್ಟಿಗೆ ಕುಳಿತು ಸಿಗರೇಟ್ ಸೇದಿತ್ತಿರುವ ಫೋಟೋ ನೋಡಿದ ಬಳಿಕ ಜೈಲಿನ ವ್ಯವಸ್ಥೆ ಬಗ್ಗೆ ಸಾಕಷ್ಟು ಅನುಮಾನಗಳು ತಲೆ ಎತ್ತಿವೆ. ಈ ಬಗ್ಗೆ ನಿವೃತ್ತಿ ಪೊಲೀಸ್​ ಅಧಿಕಾರಿ ನಾಗರಾಜ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫೋಟೋ ನೋಡಿದರೆ ನಾವು ನಂಬಬೇಕಾಗುತ್ತದೆ. ನ್ಯಾಯಾಲಯ ಮನೆ ಊಟ ನೀಡಲು ಸಹ ಅವಕಾಶ ನೀಡಿಲ್ಲ. ಹಾಗಿರುವಾಗ ಸಿಗರೇಟ್​ ನೀಡಿದ್ದು ಗಂಭೀರ ಪ್ರಕರಣ. ಅದನ್ನು ಜೈಲಿನಲ್ಲಿ ಉಪಯೋಗಿಸಲು ಅವಕಾಶ ಇಲ್ಲ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲವು ವ್ಯಕ್ತಿಗಳಿಗೆ ಬೀಡಿ, ಸಿಗರೇಟ್​ ನೀಡಲು ಅನುಮತಿ ಇದೆ. ಅದು ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಕಾನೂನಿನ ಪ್ರಕಾರವೇ ಹೋಗಬೇಕು’ ಎಂದು ನಿವೃತ್ತಿ ಪೊಲೀಸ್​ ಅಧಿಕಾರಿ ನಾಗರಾಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us