‘ಪೆಲೆಟ್ ಗನ್ ದಾಳಿ ನಡೆದೇ ಇಲ್ಲ’; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ಬ್ರಿಜ್ ಲಾಲ್ ತಿರುಗೇಟು

Updated on: Jul 30, 2026 | 10:22 PM

"ನಾನು ಅವರಿಗೆ 1966ರ ನವೆಂಬರ್ 7ರ ಘಟನೆಯನ್ನು ನೆನಪಿಸಲು ಬಯಸುತ್ತೇನೆ. ಗೋಹತ್ಯೆ ವಿರುದ್ಧ ಸಾಧುಗಳು ಗೋವುಗಳೊಂದಿಗೆ ಇದೇ ಸಂಸತ್ತಿನ ಮುಂದೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶಿಸಿದ್ದರು. ಕಾಂಗ್ರೆಸ್ ಸರ್ಕಾರ ಮಾಡಿದಂತೆ ಬಿಜೆಪಿ ಸರ್ಕಾರ ಮಾಡಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರು ಭಾರಿ ದೊಡ್ಡ ಸುಳ್ಳುಗಾರ. ಲಾಠಿಗಳಲ್ಲಿ ಮೊಳೆಗಳು ಇದ್ದುದನ್ನು ಅವರು ಎಲ್ಲಿ ನೋಡಿದರು?ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ" ಎಂದು ಬ್ರಿಜ್ ಲಾಲ್ ಟೀಕಿಸಿದ್ದಾರೆ.

ನವದೆಹಲಿ, ಜುಲೈ 30: ದೆಹಲಿಯ ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿ ದಾಳಿ ನಡೆಸಲಾಗಿತ್ತು ಎಂದು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಇಂದು ದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮಾಜಿ ಡಿಜಿಪಿ ಹಾಗೂ ಬಿಜೆಪಿ ಸಂಸದ ಬ್ರಿಜ್ ಲಾಲ್, “ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ನಾನು 37 ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದಿದ್ದೇನೆ. ಜನಸಂದಣಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಜನಸಂದಣಿ ಹತೋಟಿ ಮೀರಿದಾಗ, ರಬ್ಬರ್ ಬುಲೆಟ್ ಸೇರಿದಂತೆ ಪ್ರಾಣಾಪಾಯವಿಲ್ಲದ ಅಸ್ತ್ರಗಳನ್ನು ಬಳಸಲಾಗುತ್ತದೆ. ಅದು ಪೆಲೆಟ್ ಗನ್ ಅಲ್ಲ, ಬದಲಾಗಿ ಬೋರ್ ಗನ್” ಎಂದು ವಾಗ್ದಾಳಿ ನಡೆಸಿದ್ದಾರೆ.

“ನಾನು ಅವರಿಗೆ 1966ರ ನವೆಂಬರ್ 7ರ ಘಟನೆಯನ್ನು ನೆನಪಿಸಲು ಬಯಸುತ್ತೇನೆ. ಗೋಹತ್ಯೆ ವಿರುದ್ಧ ಸಾಧುಗಳು ಗೋವುಗಳೊಂದಿಗೆ ಇದೇ ಸಂಸತ್ತಿನ ಮುಂದೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶಿಸಿದ್ದರು. ಕಾಂಗ್ರೆಸ್ ಸರ್ಕಾರ ಮಾಡಿದಂತೆ ಬಿಜೆಪಿ ಸರ್ಕಾರ ಮಾಡಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರು ಭಾರಿ ದೊಡ್ಡ ಸುಳ್ಳುಗಾರ. ಲಾಠಿಗಳಲ್ಲಿ ಮೊಳೆಗಳು ಇದ್ದುದನ್ನು ಅವರು ಎಲ್ಲಿ ನೋಡಿದರು?ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ” ಎಂದು ಬ್ರಿಜ್ ಲಾಲ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 30, 2026 10:20 PM
Loading...
Unable to load recommendations.
Follow Us