AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಗೆದ್ದಿಲ್ಲ ಎಂದು ಪ್ರೇಕ್ಷಕರ ಮೇಲೆ ಆಪಾದನೆ ಹೊರಿಸಬೇಡಿ; ವಸಿಷ್ಠ ಸಿಂಹ ಎಚ್ಚರಿಕೆ

ಸಿನಿಮಾ ಗೆದ್ದಿಲ್ಲ ಎಂದು ಪ್ರೇಕ್ಷಕರ ಮೇಲೆ ಆಪಾದನೆ ಹೊರಿಸಬೇಡಿ; ವಸಿಷ್ಠ ಸಿಂಹ ಎಚ್ಚರಿಕೆ

ರಾಜೇಶ್ ದುಗ್ಗುಮನೆ
|

Updated on: May 18, 2024 | 8:42 AM

Share

‘ಜನರು ಥಿಯೇಟರ್​ಗೆ ಬರುತ್ತಿಲ್ಲ ಎಂಬ ವಾದವನ್ನು ನಾನು ಒಪ್ಪಲ್ಲ. ಸಾಕಷ್ಟು ಸಿನಿಮಾ ಹಿಟ್ ಆಗಿರೋದನ್ನು ನೋಡಿದ್ದೇವೆ. ಕಾಟೇರ, ಅಧ್ಯಕ್ಷ ರೀತಿಯ ಸಿನಿಮಾಗಳು ಗೆಲುವು ಕಂಡಿವೆ. ಗೆದ್ದಿರೋ ಉದಾಹರಣೆಗಳು ತುಂಬಾ ಇವೆ’ ಎಂದಿದ್ದಾರೆ ವಸಿಷ್ಠ ಸಿಂಹ.

ಸದ್ಯ ಸಿನಿಮಾ ನೋಡೋಕೆ ಜನರು ಬರುತ್ತಿಲ್ಲ ಎನ್ನುವ ಆರೋಪ ಜೋರಾಗಿದೆ. ಎಲ್ಲರೂ ಒಟಿಟಿ, ಐಪಿಎಲ್​ನ ದೂಷಿಸುತ್ತಿದ್ದಾರೆ. ಈ ಮಧ್ಯೆ ವಸಿಷ್ಠ ಸಿಂಹ ಅವರು (Vasishta Simha) ಬೇರೆಯದೇ ವಾದ ಮುಂದಿಟ್ಟಿದ್ದಾರೆ. ‘ಜನರು ಥಿಯೇಟರ್​ಗೆ ಬರುತ್ತಿಲ್ಲ ಎಂಬ ವಾದವನ್ನು ನಾನು ಒಪ್ಪಲ್ಲ. ಸಾಕಷ್ಟು ಸಿನಿಮಾ ಹಿಟ್ ಆಗಿರೋದನ್ನು ನೋಡಿದ್ದೇವೆ. ಕಾಟೇರ, ಅಧ್ಯಕ್ಷ ರೀತಿಯ ಸಿನಿಮಾಗಳು ಗೆಲುವು ಕಂಡಿವೆ. ಗೆದ್ದಿರೋ ಉದಾಹರಣೆಗಳು ತುಂಬಾ ಇವೆ. ಹಿಟ್ ಆಗದೆ ಇರೋ ಸಿನಿಮಾಗಳ ಸಂಖ್ಯೆ ಹೆಚ್ಚಿರಬಹುದು ಅಷ್ಟೇ. ಸೋತಿದ್ದನ್ನೇ ಬಣ್ಣಿಸಿ ಪ್ರೇಕ್ಷಕರ ಮೇಲೆ ಆಪಾದನೆ ಹೊರಿಸಬಾರದು. ಸಿನಿಮಾ ಬರ್ತಿದೆ ಅನ್ನೋದು ಜನರಿಗೆ ಗೊತ್ತೇ? ಐಪಿಎಲ್ ಮ್ಯಾಚ್ ನಡೆಯುವಾಗ ಸಿನಿಮಾ ಬಂದರೆ ವರ್ಕ್ ಆಗದೆ ಇರಬಹುದು. ಅದನ್ನೂ ಮೀರಿಸುವ ಕಂಟೆಂಟ್ ಕೊಟ್ಟರೆ ಜನರು ನೋಡಿಯೇ ನೋಡುತ್ತಾರೆ’ ಎಂದಿದ್ದಾರೆ ವಸಿಷ್ಠ ಸಿಂಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More