ತಮ್ಮ ನಿವಾಸದ ಎದುರು ಜನಜಂಗುಳಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ವಾರಕ್ಕೊಮ್ಮೆ ಜನತಾ ದರ್ಶನ ನಡೆಸುವುದು ಒಳಿತು

|

Updated on: Jun 16, 2023 | 1:55 PM

ಜನ ವ್ಯವಸ್ಥಿತವಾಗಿ ಸಾಲಾಗಿ ಬಂದು ತಮ್ಮ ದೂರು-ದುಮ್ಮಾನು ಹೇಳಿಕೊಳ್ಳಲು ಸಾಧ್ಯವಾಗುವ ಏರ್ಪಾಟನ್ನು ಮುಖ್ಯಮಂತ್ರಿ ಮಾಡಬೇಕು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಾರಕ್ಕೊಮ್ಮೆ ಜನತಾ ದರ್ಶನ ಕಾರ್ಯಕ್ರಮ ಶುರುಮಾಡುವುದು ಒಳ್ಳೆಯದು ಅಂತ ಈ ವಿಡಿಯೋ ನೋಡಿದರೆ ಅನಿಸುತ್ತೆ. ಅವರಿ ಒಂದು ದಿನ ಅಥವಾ ಅರ್ಧ ದಿನವನ್ನು (half-a-day) ಅದಕ್ಕೆಂದೇ ಮೀಸಲಿಟ್ಟು ಸೂಕ್ತ ವ್ಯವಸ್ಥೆ ಮಾಡಿದರೆ ಮಹಿಳೆಯರು ಜನರ ನೂಕುನುಗ್ಗಲಲ್ಲಿ ಸಿಕ್ಕು ಪರದಾಡುವುದು ತಪ್ಪುತ್ತದೆ. ಒಬ್ಬ ಯುವತಿ (young woman) ತನ್ನ ಅಹವಾಲನ್ನು ಸಿದ್ದರಾಮಯ್ಯಗೆ ತಲುಪಿಸಲು ಪಡುವ ಕಷ್ಟವನ್ನು ನೋಡಿ. ಜನರನ್ನು ತಳ್ಳಾಡಿಕೊಂಡು ಹೇಗೋ ಸಿಎಂ ಕಾರಿನ ಬಳಿ ಬಂದರೆ ಕಾರಿನ ಬಳಿಯಿರುವ ಗಡ್ಡಧಾರಿಯೊಬ್ಬ ಹೆಗಲ ಮೇಲೆ ಕೈ ಹಾಕುತ್ತಾನೆ. ಆವನು ಆಕೆಯ ಸಂಬಂಧಿಯಾಗಿರಲಾರ, ಯಾಕೆಂದರೆ ಅದಕ್ಕೂ ಮೊದಲು ಯುವತಿ ಮುಂದೆ ಬಾರದಂತೆ ಕೈ ಅಡ್ಡ ಹಿಡಿದಿರುತ್ತಾನೆ. ಇಂಥದನ್ನೆಲ್ಲ ತಪ್ಪಿಸಲು ಮತ್ತು ಜನ ವ್ಯವಸ್ಥಿತವಾಗಿ ಸಾಲಾಗಿ ಬಂದು ತಮ್ಮ ದೂರು-ದುಮ್ಮಾನು ಹೇಳಿಕೊಳ್ಳಲು ಸಾಧ್ಯವಾಗುವ ಏರ್ಪಾಟನ್ನು ಮುಖ್ಯಮಂತ್ರಿ ಮಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on