ಬೆಳಗ್ಗೆಯಿಂದ ಮಳೆಯಲ್ಲೇ ಸಿಎಂ ನಿವಾಸದ ಎದುರು ಅಭ್ಯರ್ಥಿಗಳು ನಿಂತಿದ್ದರು. ಆದರೆ ತುರ್ತಾಗಿ ಹೋಗಬೇಕಿದ್ದರಿಂದ ಸರಿಯಾಗಿ ಸಮಸ್ಯೆ ಕೇಳಲು ಆಗದೆ ಸಿಎಂ ಬೊಮ್ಮಾಯಿ ಮನೆಯಿಂದ ಹೊರಟಿದ್ದಾರೆ. ಇದೇ ವೇಳೆ ಪೊಲೀಸರು ಅಭ್ಯರ್ಥಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಿಡದೇ ಅಡ್ಡಿಪಡಿಸಿದ್ದಾರೆ. ಅಕ್ಷರಶ: ಸಿಎಂ ಬೊಮ್ಮಾಯಿ ಎದುರೇ ನೊಂದ ಅಭ್ಯರ್ಥಿಗಳನ್ನು ಪೊಲೀಸರು ಎಳೆದು ಹೊರಗೆ ಹಾಕಲು ಮುಂದಾಗಿದ್ದಾರೆ. ಆಗ ಅಭ್ಯರ್ಥಿಗಳು ಜೋರಾಗಿ ಕೂಗಾಡಿ, ತಮ್ಮ ನೋವು ತೋಡಿಕೊಂಡಿದ್ದಾರೆ. ಕೊನೆಗೆ ಕಾರು ಹತ್ತಿದ್ದ ಸಿಎಂ ಬೊಮ್ಮಾಯಿ, ಕಾರಿನಿಂದ ಇಳಿದು ಬಂದು, ಸಮಸ್ಯೆ ಆಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸಿಎಂ ಜನತಾ ದರ್ಶನದಲ್ಲಿ ಸಮಸ್ಯೆ ಹೇಳ್ಕೊಳ್ಳೋರಿಗೆ ಪೊಲೀಸರ ಅಡ್ಡಿ |Students |Tv9 kannada
Also Read:
‘ಆರು ಕೋಟಿ ಜನರ ಪರವಾಗಿ ಪುನೀತ್ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ
(Janata darshan by chief minister basavaraj bommai teacher manhandled by security police at cm house)