‘ದಯವಿಟ್ಟು ಸಿನಿಮಾ ಮಾಡೋದು ನಿಲ್ಲಿಸಣ್ಣ..’: ನಿಖಿಲ್ ಕುಮಾರಸ್ವಾಮಿಗೆ ಮನವಿ ಮಾಡಿದ್ದು ಯಾರು?
ಸಿನಿಮಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಖತ್ ಆಸಕ್ತಿ ಇದೆ. ಪ್ರಸ್ತುತ ಅವರು ‘ರೈಡರ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವರು ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಬಿಟ್ಟುಬಂದು, ಪೂರ್ತಿಯಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂದು ಅನೇಕರು ಬಯಸುತ್ತಿದ್ದಾರೆ. ಈ ಬಗ್ಗೆ ನಿಖಿಲ್ ಬಹಿರಂಗವಾಗಿಯೇ ಮಾತನಾಡಿದ್ದಾರೆ.
‘ನಮ್ಮದು ರಾಜಕಾರಣದ ಕುಟುಂಬ. ನಾನು ಚಿತ್ರರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂಬ ಭಾವನೆ ಹಲವು ಜನರಿಲ್ಲಿ ಇರುವುದು ಸತ್ಯ. ಸರವಣ ಅವರು ನನಗೆ ಈ ಮಾತು ಬಹಳ ಸಲ ಹೇಳುತ್ತಿರುತ್ತಾರೆ. ನೀವು ಸಿನಿಮಾ ಮಾಡಿದ್ದು ಸಾಕು ಅಂತ ಹೇಳುತ್ತಾರೆ. ಆದರೆ ನಾನು ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. ಸದ್ಯಕ್ಕೆ ಒಂದು ಸಿನಿಮಾ ಸಹಿ ಮಾಡಿದ್ದೇನೆ. ಅದನ್ನು ಬಿಡಲು ನನಗೆ ಮನಸ್ಸಾಗುತ್ತಿಲ್ಲ’ ಎಂದು ನಿಖಿಲ್ ಹೇಳಿದ್ದಾರೆ.
ಇದನ್ನೂ ಓದಿ:
ಮಗು ಜನಿಸಿದ ಬಗ್ಗೆ ಫಸ್ಟ್ ರಿಯಾಕ್ಷನ್ ನೀಡಿದ ನಿಖಿಲ್ ಕುಮಾರಸ್ವಾಮಿ
Published On - 9:59 am, Mon, 25 October 21