AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Sanchara 2026: ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು

Guru Sanchara 2026: ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು

ಅಕ್ಷತಾ ವರ್ಕಾಡಿ
|

Updated on: May 21, 2026 | 10:10 AM

Share

2026ರ ಗುರು ಸಂಚಾರವು ಮಿಥುನ ರಾಶಿಯವರಿಗೆ ಅದ್ಭುತ ಫಲಗಳನ್ನು ತರುತ್ತದೆ. ಆಕಸ್ಮಿಕ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಆಸ್ತಿ ಯೋಗ, ಉನ್ನತ ಶಿಕ್ಷಣಾವಕಾಶಗಳು ಲಭಿಸುತ್ತವೆ. ಗುರುಬಲದೊಂದಿಗೆ ಮನಃಶಾಂತಿ, ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ. ಧರ್ಮಕಾರ್ಯಗಳು, ಶಿಕ್ಷಕರಿಗೆ ಗೌರವ ಹಾಗೂ ಅರಿಶಿನ ಕೊಂಬು ಪರ್ಸ್‌ನಲ್ಲಿ ಇಡುವುದು ಶುಭ ತರಲಿದೆ.

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಮಿಥುನ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ 2026ರ ಗುರು ಸಂಚಾರವು ಅನೇಕ ಶುಭ ಫಲಗಳನ್ನು ತರಲಿದೆ. ಗುರು ಎರಡನೇ ಮನೆಗೆ ಪ್ರವೇಶಿಸುವುದರಿಂದ ಧನಸ್ಥಾನ, ವಾಕ್ಸ್ಥಾನ ಮತ್ತು ಕುಟುಂಬ ಸ್ಥಾನಗಳಿಗೆ ಬಲ ಸಿಗಲಿದೆ. ಆಕಸ್ಮಿಕ ಧನಯೋಗ, ಹಳೆಯ ಬಾಕಿ ವಸೂಲಿ, ಆರ್ಥಿಕ ಸ್ಥಿರತೆ, ಆಸ್ತಿ ಸಂಪಾದನೆ ಮತ್ತು ಹೂಡಿಕೆಯಿಂದ ಲಾಭಗಳ ನಿರೀಕ್ಷೆ ಇದೆ. ವೃತ್ತಿಯಲ್ಲಿ ವೇತನ ವೃದ್ಧಿ, ಬಡ್ತಿ ಮತ್ತು ಬೋನಸ್ ಸಿಗುವ ಸಾಧ್ಯತೆಗಳಿದ್ದು, ಉನ್ನತ ಶಿಕ್ಷಣಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

ಮಂಗಳ ಕಾರ್ಯಗಳು, ಮನೆ ಕಟ್ಟುವ ಯೋಗ ಮತ್ತು ವಿದೇಶ ಪ್ರಯಾಣದಂತಹ ಶುಭ ಸನ್ನಿವೇಶಗಳು ಒದಗಿ ಬರುತ್ತವೆ. ಮಾನಸಿಕ ಶಾಂತಿ ಹೆಚ್ಚಲಿದ್ದು, ಮಾತಿನಿಂದ ಅದೃಷ್ಟ ಕೂಡಿಬರಲಿದೆ. ಆರೋಗ್ಯ ಸುಧಾರಿಸುತ್ತದೆ ಮತ್ತು ಹಳೆಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ರೈತರಿಗೆ ಭೂಮಿ ಕಲಹ ನಿವಾರಣೆ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಸಣ್ಣಪುಟ್ಟ ವಾಹನ ಕಂಟಕಗಳ ಬಗ್ಗೆ ಎಚ್ಚರಿಕೆ ಇರಲಿ. ಮಕ್ಕಳನ್ನು ನಿಂದಿಸುವುದನ್ನು ಹಾಗೂ ಪ್ರೀತಿ-ಪ್ರೇಮ ವ್ಯವಹಾರಗಳಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಿ. ಗುರು ಅನುಗ್ರಹಕ್ಕಾಗಿ ದಾನ, ಗುರುಗಳಿಗೆ ಗೌರವ ಮತ್ತು ನಿತ್ಯ ಮಂತ್ರ ಜಪ (ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರುವೇ ನಮಃ) ಅಭ್ಯಾಸ ಮಾಡಿ. ನಿಮ್ಮ ಪರ್ಸ್‌ನಲ್ಲಿ ಎರಡು ಅರಿಶಿನ ಕೊಂಬು ಇಟ್ಟುಕೊಳ್ಳುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More