ದರ್ಶನ್​ ಮೇಲಿರುವ ಕೊಲೆ ಆರೋಪದ ಬಗ್ಗೆ ಆಪ್ತ ಗೆಳೆಯ ತರುಣ್​ ಸುಧೀರ್​ ಮೊದಲ ಮಾತು

ನಟ ದರ್ಶನ್​ ಅವರ ಜೊತೆ ಆಪ್ತ ಒಡನಾಟ ಹೊಂದಿರುವ ತರುಣ್​ ಸುಧೀರ್​ ಅವರು ಇದೇ ಮೊದಲ ಬಾರಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವರ್ಷಗಳಿಂದ ದರ್ಶನ್​ ಮತ್ತು ತರುಣ್​ ಸುಧೀರ್​ ಕುಟುಂಬದ ನಡುವೆ ಆತ್ಮೀಯತೆ ಇದೆ. ಈಗ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಆ ಕುರಿತು ತರುಣ್​ ಸುಧೀರ್​ ಭಾವುಕವಾಗಿ ಮಾತನಾಡಿದ್ದಾರೆ.

ದರ್ಶನ್​ ಮೇಲಿರುವ ಕೊಲೆ ಆರೋಪದ ಬಗ್ಗೆ ಆಪ್ತ ಗೆಳೆಯ ತರುಣ್​ ಸುಧೀರ್​ ಮೊದಲ ಮಾತು
|

Updated on: Jul 11, 2024 | 5:04 PM

ದರ್ಶನ್​ ನಟನೆಯ ‘ರಾಬರ್ಟ್​’, ‘ಕಾಟೇರ’ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ತರುಣ್​ ಸುಧೀರ್​ ಅವರು ಈಗ ರೇಣುಕಾ ಸ್ವಾಮಿ ಕೊಲೆ ಕೇಸ್​ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ನೋವಾಗಿದೆ. ರೇಣುಕಾ ಸ್ವಾಮಿ ಕುಟುಂಬದ ಬಗ್ಗೆಯೂ ನನಗೆ ಅಪಾರವಾದ ನೋವು ಇದೆ. ಈ ಘಟನೆ ಆಗಬಾರದಿತ್ತು. ಇಲ್ಲಿ ಕೂಡ ನಮ್ಮ ಕುಟುಂಬ ಇದೆ. ನಮ್ಮ ಅಣ್ಣನೇ ಆ ರೀತಿ ಮಾಡಿದ್ದರೆ ಏನು ನೋವು ಆಗುತ್ತೋ ಅದೇ ನೋವಲ್ಲಿ ನಾನು ಇದ್ದೇನೆ. ದರ್ಶನ್​ ಅವರದ್ದು ತಪ್ಪು ಇಲ್ಲ ಅಂತಲೇ ಹೊರಗೆ ಬರಬಹುದಲ್ಲ ಎಂಬ ನಂಬಿಕೆ ನನ್ನದು. ಅದನ್ನೂ ಮೀರಿ ಕಾನೂನು ಇದೆ. ತನಿಖೆ ಸರಿಯಾಗಿ ಆಗುತ್ತದೆ. ಹಾಗಾಗಿ ವೈಯಕ್ತಿಕವಾಗಿ ನಾನೂ ಏನೂ ಹೇಳೋಕೆ ಆಗಲ್ಲ. ದರ್ಶನ್​ ಅವರನ್ನು ನಂಬಿಕೊಂಡ ದೊಡ್ಡ ಕುಟುಂಬಕ್ಕೆ ಕೂಡ ನೋವು ಆಗಿದೆ’ ಎಂದು ತರುಣ್​ ಸುಧೀರ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us