Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್​ 14ರಂದು ನಾಮಕರಣ

ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್​ 14ರಂದು ನಾಮಕರಣ

ಮದನ್​ ಕುಮಾರ್​
|

Updated on: Mar 02, 2025 | 9:07 PM

ಚಿತ್ರಗಾರ ಕುಟುಂಬ‌ ಸುಮಾರು 4 ತಲೆಮಾರುಗಳಿಂದ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಕಲಾವಿದ ಶ್ರೀಧರ್ ಅವರು ರೆಬಲ್ ಸ್ಟಾರ್ ಅಂಬರೀಷ್ ಅವರ ಮೊಮ್ಮಗನಿಗಾಗಿ ವಿಶಿಷ್ಟವಾದ ಈ ತೊಟ್ಟಿಲು ತಯಾರಿಸಿದ್ದಾರೆ. ತೊಟ್ಟಿಲಲ್ಲಿ ಕೃಷ್ಣನ ಅವತಾರ, ದಶಾವತಾರದ ಚಿತ್ರ ಬಿಡಿಸಿದ್ದಾರೆ. ರಾಜ್​ಕುಮಾರ್ ಮನೆಗೂ ಕಲಘಟಗಿ ತೊಟ್ಟಿಲು ಹೋಗಿತ್ತು.

ಅಭಿಷೇಕ ಅಂಬರೀಶ್ ಪುತ್ರನ ನಾಮಕರಣಕ್ಕೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಚಿತ್ರಗಾರ ಕುಟುಂಬದಿಂದ ತೊಟ್ಟಿಲು ನಿರ್ಮಾಣ ಮಾಡಲಾಗಿದೆ.ಕಲಾವಿದ ಶ್ರೀಧರ್ ಸೌಕಾರ್ ಅವರು ಕಳೆದ ಎರಡು ತಿಂಗಳಿಂದ ತೊಟ್ಟಿಲಿನ ಕೆಲಸ ಮಾಡುತ್ತಿದ್ದಾರೆ. ಮಾರ್ಚ್​ 14ರಂದು ಅಂಬಿ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದೆ. ಈ ಮೊದಲು ಇದೇ ಚಿತ್ರಗಾರ ಮನೆಯಿಂದ ಯಶ್ ಮನೆಗೆ ತೊಟ್ಟಿಲು ಹೋಗಿತ್ತು. ಅಂಬರೀಶ್ (Ambareesh) ಆಸೆಯಂತೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲಾಗಿತ್ತು. ಈಗ ಅಂಬರೀಷ ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ಬರುತ್ತಿದೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.