ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ: ಹಣ ನೀಡುವಂತೆ ಮಾನಸಿಕ ಹಿಂಸೆ?
Kallayyajja Swamiji, Veereshwara Punyashram, Life Threats, Gadag, Trustees Financial Dispute, Gadag News, ಕಲ್ಲಯ್ಯಜ್ಜ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮ, ಜೀವಬೆದರಿಕೆ, ಗದಗ, tv9 kannada, tv9 kannada live, kannada news, tv9 kannada news, tv9 kannada news live, tv 9 kannada, tv 9 kannada live, today news kannada, tv9kannada, tv9 kannada live news, breaking news kannada, tv9 news kannada live, todays news in kannada, tv9 live kannada, tv9 kannada live streaming, tv9 kannada web, kannada breaking news, tv9 news live kannada, tv9 kannada live today, tv9 kannada live news today
ಮುಖ್ಯಾಂಶಗಳು
- ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಜೀವ ಬೆದರಿಕೆ ಆರೋಪ
- ಟ್ರಸ್ಟಿಗಳಿಂದ ಕಿರುಕುಳ ಹಿನ್ನೆಲೆ ಕಣ್ಣೀರು ಹಾಕಿದ ಕಲ್ಲಯ್ಯಜ್ಜ ಶ್ರೀ
- ಹಣ ಕೊಡದಿದ್ದಕ್ಕೆ ಶ್ರೀಗಳ ವಿರುದ್ಧ ಟ್ರಸ್ಟಿಗಳಿಂದ ಅಪಪ್ರಚಾರ?
ಗದಗ, ಜೂನ್ 25: ಉತ್ತರ ಕರ್ನಾಟಕದ ಪ್ರಸಿದ್ಧಿ ಮಠ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಮೂವರು ಟ್ರಸ್ಟಿಗಳಿಂದಲೇ ತನಗೆ ಜೀವ ಬೆದರಿಕೆ ಇದೆ ಎಂದು ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರೇ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷಾಂತರ ಹಣ ಕೊಡುವಂತೆ ಓರ್ವ ಟ್ರಸ್ಟಿ ಶ್ರೀಗಳಿಗೆ ಒತ್ತಾಯ ಮಾಡುತ್ತಿದ್ದು, ಹಣ ಕೊಡದಿದ್ದಕ್ಕೆ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆಯಂತೆ. ಈ ಸಂಬಂಧ ಶ್ರೀಗಳು ಕಣ್ಣೀರು ಹಾಕಿದ್ದು, ಯಾವುದೇ ಕ್ಷಣದಲ್ಲಾದರೂ ತನ್ನ ಹಲ್ಲೆ ನಡೆಯುವ ಸಾಧ್ಯತೆಯಿದೆ. ಆಶ್ರಮಕ್ಕೆ ತಾನು ಪೀಠಾಧಿಪಯಾದ 59 ಲಕ್ಷ ಸಾಲವಿತ್ತು. ಈಗ ಸಾಲವನ್ನು ತೀರಿಸಿ, 4 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೆನೆ. ಆಶ್ರಮದ ಎಲ್ಲ ಲೆಕ್ಕಪತ್ರ, ಖರ್ಚು ವೆಚ್ಚಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ದೇಣಿಗೆ ನೀಡಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇಟ್ಟಿದ್ದೇನೆಂದು ಶ್ರೀಗಳು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

