ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದಿದ್ದು ಐತಿಹಾಸಿಕ ಮಳೆ, 133 ವರ್ಷಗಳಲ್ಲಿ ಇಂಥ ಮಳೆಯಾಗಿರಲಿಲ್ಲ!

ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮುಕ್ಕಾಲು ಭಾಗ ಮುಳುಗುವಷ್ಟು ನೀರು ಹರಿಯುತಿತ್ತು. ಇದು ಮಾನ್ಸೂನ್ ಆರಂಭಗೊಳ್ಳುವ ಮೊದಲಿನ ಮಳೆ ಮಾರಾಯ್ರೇ, ಪಿಕ್ಚರ್ ಅಭಿ ಬಾಕೀ ಹೈ....ಯಾಕೆಂದರೆ ಇಲ್ಲಿಂದ ಅಕ್ಟೋಬರ್ ವರೆಗೆ ಮಳೆಗಾಲ, ನಗರದಲ್ಲಿ ಮಳೆ ಹೀಗೆಯೇ ಸುರಿದರೆ ನಿವಾಸಿಗಳು ಎದುರಿಸಬಹುದಾದ ಅವಾಂತರಗಳನ್ನು ಒಮ್ಮೆ ಊಹಿಸಿ ನೋಡಿ.

ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದಿದ್ದು ಐತಿಹಾಸಿಕ ಮಳೆ, 133 ವರ್ಷಗಳಲ್ಲಿ ಇಂಥ ಮಳೆಯಾಗಿರಲಿಲ್ಲ!
|

Updated on: Jun 03, 2024 | 11:11 AM

ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಲ್ಲಿ (Bengaluru) ಸುರಿದಿದ್ದು ಪ್ರಾಯಶಃ ನಮ್ಮ ಅಜ್ಜಿ ತಾತಂದಿರ ತಂದೆ-ತಾಯಿಗಳು ಸಹ ಕಂಡು ಕೇಳರಿಯದ ರಾಕ್ಷಸ ಮಳೆ (torrential rains). 133 ವರ್ಷಗಳ ಹಿಂದೆ ಈ ಪಾಟಿ ಮಳೆ ಸುರಿದಿತ್ತಂತೆ. 110.7 ಮಿಮೀ ಮಳೆ ಒಂದೇ ಬಾರಿಗೆ ಅಂದರೆ ಸುಮ್ನೇನಾ? ನಗರದಾದ್ಯಂತ ಮಳೆ ಮಾರಾಯ್ರೇ. ಕುಂಭದ್ರೋಣ ಮತ್ತು ಗಾಳಿಗೆ 206 ಮರಗಳು ನೆಲಕ್ಕುರುಳಿವೆ (206 trees uprooted) ಅಂದರೆ ನಂಬ್ತೀರಾ? ಮರಗಳು ಬೀಳದ ಜಾಗಗಳಿಲ್ಲ. ಹೆಚ್ಚಿನವು ರಸ್ತೆಗಳ ಮೇಲೆ ಉರುಳಿದರೆ, ಕೆಲವು ಫ್ಲೈಓವರ್ ಗಳ ಮೇಲೆ, ಕೆಲವು ಟ್ರಾನ್ಸ್ ಫಾರ್ಮರ್ ಗಳ ಮೇಲೆ, ಕಾರುಗಳ ಮೇಲೆ, ಬೈಕ್ ಗಳ ಮೇಲೆ, ಆಟೋಗಳ ಮೇಲೆ ಮತ್ತು ಮನೆಗಳ ಮೇಲೆ. ರಾತ್ರಿ 8 ಗಂಟೆಗೆ ವರ್ಷಧಾರೆ ಶುರುಗೊಂಡಿದ್ದರಿಂದ ಸಂಡೇ ಅಂತ ಫ್ಯಾಮಿಲಿಗಳ ಜೊತೆ ಹೊರಗಡೆ ಬಂದಿದ್ದ ಜನ ವಾಪಸ್ಸು ಮನೆಗೆ ಹೋಗಲು ಹರಸಾಹಸ ಪಡಬೇಕಯಿತು. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮುಕ್ಕಾಲು ಭಾಗ ಮುಳುಗುವಷ್ಟು ನೀರು ಹರಿಯುತಿತ್ತು. ಇದು ಮಾನ್ಸೂನ್ ಆರಂಭಗೊಳ್ಳುವ ಮೊದಲಿನ ಮಳೆ ಮಾರಾಯ್ರೇ, ಪಿಕ್ಚರ್ ಅಭಿ ಬಾಕೀ ಹೈ….ಯಾಕೆಂದರೆ ಇಲ್ಲಿಂದ ಅಕ್ಟೋಬರ್ ವರೆಗೆ ಮಳೆಗಾಲ, ನಗರದಲ್ಲಿ ಮಳೆ ಹೀಗೆಯೇ ಸುರಿದರೆ ನಿವಾಸಿಗಳು ಎದುರಿಸಬಹುದಾದ ಅವಾಂತರಗಳನ್ನು ಒಮ್ಮೆ ಊಹಿಸಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆಗೆ ಹಲವೆಡೆ ಅವಾಂತರ: ಮೆಟ್ರೋ ಟ್ರ್ಯಾಕ್​ ಮೇಲೆ ಬಿದ್ದ ಮರದ ಕೊಂಬೆ

Follow us
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ