ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಶನಿವಾರ ಸೂರ್ಯೋದಯ ವೀಕ್ಷಣೆ

ಅರುಣ್​ ಕುಮಾರ್​ ಬೆಳ್ಳಿ

Updated on: Jun 01, 2024 | 11:07 AM

ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಪ್ರಧಾನಿ ಮೋದಿ ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತುಕೊಂಡರು. ಪ್ರಧಾನಿಯವರ ಧ್ಯಾನ ಇವತ್ತು ಮಧ್ಯಾಹ್ನ ಕೊನೆಗೊಳ್ಳಲಿದ್ದು ಅಲ್ಲಿಂದ ತೆರಳಿ ಅವರು ಕನ್ಯಾಕುಮಾರಿಯಲ್ಲೇ ಇರುವ 133 ಅಡಿ ಎತ್ತರದ ತಿರುವಲ್ಲುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಕನ್ಯಾಕುಮಾರಿ (ತಮಿಳುನಾಡು): ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ (Vivekananda Rock Memorial) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಧ್ಯಾನ, ಮೌನವ್ರತ, ಪೂಜೆ ಮತ್ತು ಯೋಗ ಮೂರನೇ ಮತ್ತು ಕೊನೆಯ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಬೆಳಗಿನ ಜಾವವೇ ಎದ್ದ ಪ್ರಧಾನಿ ಮೋದಿ ಭಕ್ತಿಯ ಪ್ರತೀಕವಾಗಿರುವ ಕಾವಿ ಉಡುಗೆ ತೊಟ್ಟು ಹಣೆಗೆ ವಿಭೂತಿ (holy ash) ಮತ್ತು ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದರು ಮತ್ತು ಸೂರ್ಯದೇವನಿಗೆ ವಂದನೆ ಸಲ್ಲಿಸಿದರು. ಅದಾದ ಮೇಲೆ ಅವರು ವಿವೇಕಾನಂದ ಧ್ಯಾನ ಕೇಂದ್ರದಲ್ಲಿ ಧ್ಯಾನಾಸಕ್ತರಾದರು. ವಿವೇಕಾನಂದ ಪ್ರತಿಮೆಗೆ ಪೂಜೆ ಸಲ್ಲಿಸಿದ ಮೇಲೆ ಅವರು ಸ್ವಲ್ಪ ಹೊತ್ತು ಪ್ರಾಣಯಾಮ ಮಾಡುವುದನ್ನು ನೋಡಬಹುದು. ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಅವರು ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತುಕೊಂಡರು. ಪ್ರಧಾನಿ ಮೋದಿಯವರ ಧ್ಯಾನ ಇವತ್ತು ಮಧ್ಯಾಹ್ನ ಕೊನೆಗೊಳ್ಳಲಿದ್ದು ಅಲ್ಲಿಂದ ತೆರಳಿ ಅವರು ಕನ್ಯಾಕುಮಾರಿಯಲ್ಲೇ ಇರುವ 133 ಅಡಿ ಎತ್ತರದ ತಿರುವಲ್ಲುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Modi in Kanniyakumari: ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.