ಕೋಲಾರ: ಶೌಚಾಲಯದಲ್ಲೇ ಅಡುಗೆ, ಊಟ ಮಾಡುತ್ತಿದ್ದ ಉತ್ತರ ಭಾರತದ ವ್ಯಕ್ತಿ!
ಕೋಲಾರ ಜಿಲ್ಲೆಯ ಕೆಜಿಎಫ್ ಮುನಿಸಿಪಲ್ ಬಸ್ ನಿಲ್ದಾಣದ ಶೌಚಾಲಯದಲ್ಲೇ ವ್ಯಕ್ತಿಯೊಬ್ಬ ವಾಸವಿದ್ದು ಅಡುಗೆ ಮಾಡಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯ ನಿರ್ವಹಣೆಗೆ ಅನಧಿಕೃತವಾಗಿ ನೇಮಕಗೊಂಡಿದ್ದ ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳು ಆತನನ್ನು ಹೊರಹಾಕಿ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಲಾರ, ಆಗಸ್ಟ್ 31: ಜಿಲ್ಲೆಯ ಕೆಜಿಎಫ್ ಮುನಿಸಿಪಲ್ ಬಸ್ ನಿಲ್ದಾಣದಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ಶೌಚಾಲಯ ನಿರ್ವಹಣೆಗಾಗಿ ನಗರಸಭೆ ಸಿಬ್ಬಂದಿಯಿಂದ ಅನಧಿಕೃತವಾಗಿ ನೇಮಕಗೊಂಡಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ, ಅದೇ ಶೌಚಾಲಯದಲ್ಲಿ ವಾಸವಾಗಿದ್ದುಕೊಂಡು ಅಲ್ಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದ. ಈ ಅನಾಗರಿಕ ಕೃತ್ಯದ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಕೆಜಿಎಫ್ ನಗರಸಭೆ ಅಧಿಕಾರಿಗಳು, ಆ ವ್ಯಕ್ತಿಯನ್ನು ಶೌಚಾಲಯದಿಂದ ಹೊರಹಾಕಿ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 31, 2026 12:09 PM
Follow Us

