‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರದಲ್ಲಿ ಅನೇಕರು ಉದ್ದೇಶ ಪೂರ್ವಕವಾಗಿ ನಿಯಮ ಮೀರಿದ್ದರು. ಕೆಲವರು ಮಿತಿಮೀರಿ ನಡೆದುಕೊಂಡಿದ್ದರು. ಹೀಗಾಗಿ, ವೀಕೆಂಡ್ನಲ್ಲಿ ಸುದೀಪ್ ಕಡೆಯಿಂದ ಕ್ಲಾಸ್ ಪಕ್ಕಾ ಎಂದು ಅನೇಕರು ಊಹಿಸಿದ್ದರು. ಅದು ನಿಜವಾಗಿದೆ. ಹೊಸ ಪ್ರೋಮೋದಲ್ಲಿ ಸುದೀಪ್ ಎಚ್ಚರಿಕೆ ಒಂದನ್ನು ನೀಡಿದ್ದಾರೆ. ‘ನಿಯಮಗಳಿಗೆ ನಿಯತ್ತಾಗಿ ಇದ್ದವರು ಯಾರು? ಮಿತಿ ಮೀರಿ ನಿಯಮಗಳನ್ನು ಮುರಿದವರು ಯಾರು? ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’ ಎಂದು ಸುದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:26 pm, Sat, 12 October 24