ಕೋಲಾರದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಕೋಲಾರದ ಪಿ.ಸಿ. ಬಡಾವಣೆಯ ಭಕ್ತರು ಶ್ರಾವಣ ಮಾಸದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ 7 ಟನ್ ತರಕಾರಿಗಳನ್ನು ದಾನ ಮಾಡಿದ್ದಾರೆ. ಕೋಲಾರ ಮತ್ತು ಚಿಂತಾಮಣಿ ಮಾರುಕಟ್ಟೆಗಳಿಂದ ಖರೀದಿಸಿದ ವಿವಿಧ ತರಕಾರಿಗಳನ್ನು ತಿರುಮಲಕ್ಕೆ ಕಳುಹಿಸಲಾಗಿದೆ. ಪ್ರೇಮ್ ಕುಮಾರ್ ಮತ್ತು ಅವರ ಸ್ನೇಹಿತರು ಈ ದಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಿರುಮಲಕ್ಕೆ ತರಕಾರಿಗಳನ್ನು ಕಳುಹಿಸುವ ಮುನ್ನ ಪೂಜೆಯನ್ನು ಸಲ್ಲಿಸಲಾಯಿತು.
ಕೋಲಾರ, ಆಗಸ್ಟ್ 15: ಶ್ರಾವಣ ಮಾಸ ಹಿನ್ನೆಲೆಯಲ್ಲಿ ಕೋಲಾರ ನಗರದ ಪಿಸಿ ಬಡಾವಣೆಯ ತಿಮ್ಮಪ್ಪನ ಭಕ್ತರು ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ ತರಕಾರಿ ಕಳುಹಿಸಿದರು. ತಿರುಮಲದಲ್ಲಿ ನಡೆಯುವ ನಿತ್ಯ ದಾಸೋಹಕ್ಕಾಗಿ ಕೋಲಾರದ ಪಿಸಿ ಬಡಾವಣೆಯ ಪ್ರೇಮ್ ಕುಮಾರ್ ಹಾಗೂ ಆವರ ಸ್ನೇಹಿತರು ಸುಮಾರು 7 ಟನ್ ವಿವಿಧ ಬಗೆಯ ತರಕಾರಿಗಳನ್ನು ಕಳಿಸಿಕೊಟ್ಟರು. ಕೋಲಾರ ಹಾಗೂ ಚಿಂತಾಮಣಿ ಮಾರುಕಟ್ಟೆಯಿಂದ ಖರೀದಿ ಮಾಡಿದ ಸುಮಾರು 7 ಟನ್ ತರಕಾರಿಯನ್ನು ದಾಸೋಹಕ್ಕೆಂದು ಕಳಿಸಿಕೊಡಲಾಗಿದೆ. ತಿರುಪತಿ ತಿರುಮಲದಿಂದ ಬಂದಿದ್ದ ಲಾರಿಯಲ್ಲಿ, ಹುರುಳಿಕಾರಯಿ, ಸೌತೇಕಾರಿ, ಕ್ಯಾರೆಟ್, ಕ್ಯಾಪ್ಸಿಕಮ್, ಮೂಲಂಗಿ, ಗೋರಿಕಾಯಿ, ಬೀಟ್ ರೋಟ್, ಆಲೂಗಡ್ಡೆ ಸೇರಿ ಹಲವು ಬಗೆ ಬಗೆಯ ತರಕಾರಿಗಳನ್ನು ಕಳಿಸಿಕೊಡಲಾಯಿತು. ತರಕಾರಿಯನ್ನು ಕಳಿಸುವುದಕ್ಕೂ ಮುನ್ನ ಕೋಲಾರದ ಪಿ.ಸಿ.ಬಡಾವಣೆಯಲ್ಲಿ ತಿರುಮಲದಿಂದ ಬಂದಿದ್ದ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.

