AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು

ಕೋಲಾರದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: ವಿವೇಕ ಬಿರಾದಾರ|

Updated on: Aug 15, 2025 | 6:40 PM

Share

ಕೋಲಾರದ ಪಿ.ಸಿ. ಬಡಾವಣೆಯ ಭಕ್ತರು ಶ್ರಾವಣ ಮಾಸದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ 7 ಟನ್ ತರಕಾರಿಗಳನ್ನು ದಾನ ಮಾಡಿದ್ದಾರೆ. ಕೋಲಾರ ಮತ್ತು ಚಿಂತಾಮಣಿ ಮಾರುಕಟ್ಟೆಗಳಿಂದ ಖರೀದಿಸಿದ ವಿವಿಧ ತರಕಾರಿಗಳನ್ನು ತಿರುಮಲಕ್ಕೆ ಕಳುಹಿಸಲಾಗಿದೆ. ಪ್ರೇಮ್ ಕುಮಾರ್ ಮತ್ತು ಅವರ ಸ್ನೇಹಿತರು ಈ ದಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಿರುಮಲಕ್ಕೆ ತರಕಾರಿಗಳನ್ನು ಕಳುಹಿಸುವ ಮುನ್ನ ಪೂಜೆಯನ್ನು ಸಲ್ಲಿಸಲಾಯಿತು.

ಕೋಲಾರ, ಆಗಸ್ಟ್​ 15: ಶ್ರಾವಣ ಮಾಸ ಹಿನ್ನೆಲೆಯಲ್ಲಿ ಕೋಲಾರ ನಗರದ ಪಿಸಿ ಬಡಾವಣೆಯ ತಿಮ್ಮಪ್ಪನ ಭಕ್ತರು ತಿರುಪತಿ ತಿಮ್ಮಪ್ಪನ ದೇವಸ್ಥಾನದ ದಾಸೋಹಕ್ಕೆ ತರಕಾರಿ ಕಳುಹಿಸಿದರು. ತಿರುಮಲದಲ್ಲಿ ನಡೆಯುವ ನಿತ್ಯ ದಾಸೋಹಕ್ಕಾಗಿ ಕೋಲಾರದ ಪಿಸಿ ಬಡಾವಣೆಯ ಪ್ರೇಮ್​ ಕುಮಾರ್ ಹಾಗೂ ಆವರ ಸ್ನೇಹಿತರು ಸುಮಾರು 7 ಟನ್​ ವಿವಿಧ ಬಗೆಯ ತರಕಾರಿಗಳನ್ನು ಕಳಿಸಿಕೊಟ್ಟರು. ಕೋಲಾರ ಹಾಗೂ ಚಿಂತಾಮಣಿ ಮಾರುಕಟ್ಟೆಯಿಂದ ಖರೀದಿ ಮಾಡಿದ ಸುಮಾರು 7 ಟನ್ ತರಕಾರಿಯನ್ನು ದಾಸೋಹಕ್ಕೆಂದು ಕಳಿಸಿಕೊಡಲಾಗಿದೆ. ತಿರುಪತಿ ತಿರುಮಲದಿಂದ ಬಂದಿದ್ದ ಲಾರಿಯಲ್ಲಿ, ಹುರುಳಿಕಾರಯಿ, ಸೌತೇಕಾರಿ, ಕ್ಯಾರೆಟ್​, ಕ್ಯಾಪ್ಸಿಕಮ್​, ಮೂಲಂಗಿ, ಗೋರಿಕಾಯಿ, ಬೀಟ್ ರೋಟ್, ಆಲೂಗಡ್ಡೆ ಸೇರಿ​ ಹಲವು ಬಗೆ ಬಗೆಯ ತರಕಾರಿಗಳನ್ನು ಕಳಿಸಿಕೊಡಲಾಯಿತು. ತರಕಾರಿಯನ್ನು ಕಳಿಸುವುದಕ್ಕೂ ಮುನ್ನ ಕೋಲಾರದ ಪಿ.ಸಿ.ಬಡಾವಣೆಯಲ್ಲಿ ತಿರುಮಲದಿಂದ ಬಂದಿದ್ದ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.

Follow Us
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More