AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಮಳೆಗಾಗಿ ವಿಭಿನ್ನ ಹರಕೆ: ಊಡಚಮ್ಮ ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ

ಕೊಪ್ಪಳದಲ್ಲಿ ಮಳೆಗಾಗಿ ವಿಭಿನ್ನ ಹರಕೆ: ಊಡಚಮ್ಮ ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ

ಶಿವಕುಮಾರ್ ಪತ್ತಾರ್
| Edited By: |

Updated on: Jul 03, 2026 | 11:29 AM

Share

Koppal News: ಕೊಪ್ಪಳ ಜಿಲ್ಲೆಯಲ್ಲಿ ಮಳೆಗಾಗಿ ವಿಶಿಷ್ಟ ಹರಕೆಯನ್ನು ಗ್ರಾಮಸ್ಥರು ಪೂರೈಸಿದ್ದಾರೆ. ಬರಗಾಲದ ಆತಂಕದಲ್ಲಿರುವ ತಳಬಾಳು ಗ್ರಾಮದ ಜನತೆ ಅರಕೇರಾ ಗ್ರಾಮದ ಊಡಚಮ್ಮ ದೇವಿ ದೇಗುಲಕ್ಕೆ ಪಾದಯಾತ್ರೆ ಕೈಗೊಂಡು, ರಾತ್ರಿಪೂರ್ತಿ ಭಜನೆ ನಡೆಸಿದ್ದಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದ ಈ ಪದ್ಧತಿಯಿಂದ ಮಳೆಯಾಗುತ್ತದೆ ಎಂಬ ಅಚಲ ನಂಬಿಕೆ ಇಲ್ಲಿನವರಲ್ಲಿದೆ.

ಕೊಪ್ಪಳ, ಜುಲೈ 03: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಆತಂಕದ ನಡುವೆ, ತಳಬಾಳು ಗ್ರಾಮದ ಜನತೆ ಮಳೆಗಾಗಿ ವಿಭಿನ್ನ ಹರಕೆಯನ್ನು ಪೂರೈಸಿದ್ದಾರೆ. ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು, ಗ್ರಾಮಸ್ಥರು ತಳಬಾಳು ಗ್ರಾಮದಿಂದ ಅರಕೇರಾ ಗ್ರಾಮದಲ್ಲಿರುವ ಊಡಚಮ್ಮ ದೇವಿ ದೇಗುಲದವರೆಗೆ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆ ಮುಗಿದ ನಂತರ, ರಾತ್ರಿಪೂರ್ತಿ ಊಡಚಮ್ಮ ದೇವಿ ದೇಗುಲದ ಮುಂದೆ ಭಜನೆ ಮಾಡುವ ಮೂಲಕ ದೇವರ ಮೊರೆ ಇಟ್ಟಿದ್ದಾರೆ. ಈ ವಿಶಿಷ್ಟ ಪ್ರಾರ್ಥನೆಯು ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹಿರಿಯರಿಂದ ಬಂದ ಈ ವಾಡಿಕೆಯ ಪ್ರಕಾರ, ಊಡಚಮ್ಮ ದೇವಿ ದರ್ಶನಕ್ಕೆ ಬಂದು ಇಡೀ ರಾತ್ರಿ ಭಜನೆ ಮಾಡಿದರೆ ಮಳೆ ಬರುತ್ತದೆ ಎಂಬ ಅಚಲ ನಂಬಿಕೆ ಗ್ರಾಮಸ್ಥರಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us