ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಪಶುವೈದ್ಯರ ನೇಮಕಾತಿ ತನಿಖೆ ವೇಳೆ ಬೇರೆ ಅಕ್ರಮಗಳ ಬಗ್ಗೆಯೂ ಶಂಕಿ ವ್ಯಕ್ತವಾಗಿವೆ. ಡಿವೈಎಸ್ಪಿ ನೇಮಕಾತಿಯಲ್ಲೂ ನಡೆದಿದೆಯಾ ಅಕ್ರಮ ನಡೆದಿರುವ ಅನುಮಾನಗಳ ವ್ಯಕ್ತವಾಗಿವೆ. ಯಾಕಂದ್ರೆ, 2023-24ರಲ್ಲಿ ನಡೆದಿದ್ದ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಮಿನೇಷನ್ ಪ್ರೊಬೆಷನರಿ ಅಭ್ಯರ್ಥಿಗಳ ಜೊತೆ ಕನ್ನಾಳೆ ಫೋಟೋ ತೆಗೆಸಿಕೊಂಡಿದ್ದಾನೆ. ಅಲ್ಲದೇ ಅಭ್ಯರ್ಥಿಗಳ ಜೊತೆ ಕನ್ನಾಳೆ ಸತತ ಸಂಪರ್ಕದಲ್ಲಿ ಇರುವ ಮಾಹಿತಿ ಸಹ ಲಭ್ಯವಾಗಿದೆ. ಇದರಿಂದ ಸಿಐಡಿ ಅಧಿಕಾರಿಗಳು ಎಲ್ಲಾ ಬೇರೆ ಬೇರೆ ಆಯಾಮಾಗಳಲ್ಲೂ ತೀವ್ರ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 01): ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಸಿಐಡಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಹಾಗೂ ಬಸವರಾಜ ಕನ್ನಾಳೆ ಅವರನ್ನು ವಿಚಾರಣೆ ನಡೆಸಿದಾಗ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿದೆ. ಇಬ್ಬರ ನಡುವೆ ಸಂಪರ್ಕ ಇರುವುದು ದೃಢವಾಗಿದೆ. ಇನ್ನು ಪಶುವೈದ್ಯರ ನೇಮಕಾತಿ ತನಿಖೆ ವೇಳೆ ಬೇರೆ ಅಕ್ರಮಗಳ ಬಗ್ಗೆಯೂ ಶಂಕಿ ವ್ಯಕ್ತವಾಗಿವೆ. ಡಿವೈಎಸ್ಪಿ ನೇಮಕಾತಿಯಲ್ಲೂ ನಡೆದಿದೆಯಾ ಅಕ್ರಮ ನಡೆದಿರುವ ಅನುಮಾನಗಳ ವ್ಯಕ್ತವಾಗಿವೆ. ಯಾಕಂದ್ರೆ, 2023-24ರಲ್ಲಿ ನಡೆದಿದ್ದ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಮಿನೇಷನ್ ಪ್ರೊಬೆಷನರಿ ಅಭ್ಯರ್ಥಿಗಳ ಜೊತೆ ಕನ್ನಾಳೆ ಫೋಟೋ ತೆಗೆಸಿಕೊಂಡಿದ್ದಾನೆ. ಅಲ್ಲದೇ ಅಭ್ಯರ್ಥಿಗಳ ಜೊತೆ ಕನ್ನಾಳೆ ಸತತ ಸಂಪರ್ಕದಲ್ಲಿ ಇರುವ ಮಾಹಿತಿ ಸಹ ಲಭ್ಯವಾಗಿದೆ. ಇದರಿಂದ ಸಿಐಡಿ ಅಧಿಕಾರಿಗಳು ಎಲ್ಲಾ ಬೇರೆ ಬೇರೆ ಆಯಾಮಾಗಳಲ್ಲೂ ತೀವ್ರ ವಿಚಾರಣೆ ನಡೆಸಿದ್ದಾರೆ.

