ಅಸ್ವಸ್ಥರಾಗಿರುವ ಕುಮಾರಸ್ವಾಮಿ ಗುಣಮುಖರಾಗಿ ಬರಲಿ, ಎಲ್ಲ ಆರೋಪಗಳಿಗೆ ಉತ್ತರಿಸುವೆ: ಡಿಕೆ ಸುರೇಶ್
ಕುಕ್ಕರ್ ಗಳನ್ನು ಹಂಚುವ ಅವಶ್ಯಕತೆ ತನಗಿಲ್ಲ್ಲ ಎಂದು ಹೇಳಿದ ಸುರೇಶ್, ಕೆಲವರು ಪ್ರಚಾರಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು. ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದ ಸುರೇಶ್ ಜೆಡಿಎಸ್ ನಾಯಕ ವಾಪಸ್ಸು ಬಂದ ಬಳಿಕ ರಾಜಕಾರಣದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.
ಬೆಂಗಳೂರು: ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಎರಡು ದಿನಗಳ ಅವಧಿಯಲ್ಲಿ ಸುಮಾರು 4 ಲಕ್ಷ ಕುಕ್ಕರ್ ಗಳನ್ನು (cooker) ಹಂಚಿದ್ದಾರೆಂದು ಆರೋಪಿಸಿ ಪೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಕುಮಾರಸ್ವಾಮಿ ಮಾಡಿರುವ ಅರೋಪಗಳಿಗೆ ಉತ್ತರ ನೀಡಿದರು. ಕುಕ್ಕರ್ ಗಳನ್ನು ಹಂಚುವ ಅವಶ್ಯಕತೆ ತನಗಿಲ್ಲ್ಲ ಎಂದು ಹೇಳಿದ ಸುರೇಶ್, ಕೆಲವರು ಪ್ರಚಾರಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು. ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದ ಸುರೇಶ್ ಜೆಡಿಎಸ್ ನಾಯಕ ವಾಪಸ್ಸು ಬಂದ ಬಳಿಕ ರಾಜಕಾರಣದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು. ರಾಜಕೀಯದಲ್ಲಿ ಎದುರಾಳಿಗಳು ಪ್ರಬಲವಾಗಿರಬೇಕು ಆಗಲೇ ರಾಜಕಾರಣ ಆಸಕ್ತಿಕರ ಮತ್ತು ಕುತೂಹಲಕಾಗಿಯಾರುತ್ತದೆ, ಅವರ ಎಲ್ಲ ಪ್ರಶ್ನೆಗಳಿಗೆ ಸ್ವಾಗತ, ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಬರಲಿ ಚರ್ಚೆ ಮಾಡೋಣ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

