AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ: ಡಾ.ಶೆಲ್ವಪಿಳೈ ಅಯ್ಯಂಗಾರ್

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ: ಡಾ.ಶೆಲ್ವಪಿಳೈ ಅಯ್ಯಂಗಾರ್

ರಾಮ್​, ಮೈಸೂರು
| Edited By: |

Updated on: Jan 12, 2026 | 12:40 PM

Share

ಖಾಸಗಿ ಸ್ಥಳದಲ್ಲಿ ದೊರೆತ ನಿಧಿ 100 ವರ್ಷಕ್ಕಿಂತ ಹಳೆಯದಾಗಿದ್ದರೆ ಅದು ಪಾರಂಪರಿಕ ಮೌಲ್ಯವನ್ನು ಹೊಂದಿರುತ್ತದೆ. ಇಂತಹ ನಿಧಿ ಭಾರತ ಸರ್ಕಾರಕ್ಕೆ ಸೇರಿದ್ದು, ಅದನ್ನು ಪತ್ತೆ ಮಾಡಿದವರಿಗೆ ಮೌಲ್ಯದ ಆಧಾರದ ಮೇಲೆ ಬಹುಮಾನ ನೀಡಲಾಗುವುದು. ಜಿಲ್ಲಾಧಿಕಾರಿಗಳು, ಪುರಾತತ್ವಶಾಸ್ತ್ರಜ್ಞರು, ನಾಣ್ಯಶಾಸ್ತ್ರಜ್ಞರು ಮತ್ತು ಚಿನ್ನದ ಮೌಲ್ಯಮಾಪಕರು ಇದರ ಪ್ರಾಚೀನತೆಯನ್ನು ನಿರ್ಧರಿಸುತ್ತಾರೆ.

ಗದಗ, ಜ.12: ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಕುರಿತು ಇತಿಹಾಸ ತಜ್ಞರಾದ ಡಾ.ಶೆಲ್ವಪಿಳೈ ಅಯ್ಯಂಗಾರ್ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅವರು ಭಾರತದ ನಿಧಿ ಕಾನೂನುಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಒಂದು ವೇಳೆ ಖಾಸಗಿ ಸ್ಥಳದಲ್ಲಿ ಚಿನ್ನ ದೊರೆತರೆ ಮತ್ತು ಅದು 100 ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಪಾರಂಪರಿಕ ಮೌಲ್ಯವನ್ನು ಹೊಂದಿದ್ದರೆ, ಅದನ್ನು ಭಾರತ ಸರ್ಕಾರ ವಶಪಡಿಸಿಕೊಳ್ಳುತ್ತದೆ. ದೇಶದ ಸಂವಿಧಾನವು ಇತಿಹಾಸ ಮತ್ತು ಪರಂಪರೆಯನ್ನು ಉಳಿಸುವ ಕುರಿತು ವಿಧಿಗಳನ್ನು ಹೊಂದಿರುವುದರಿಂದ, ಇಂತಹ ಐತಿಹಾಸಿಕ ಮೌಲ್ಯದ ವಸ್ತುಗಳು ಸರ್ಕಾರಕ್ಕೆ ಸೇರುತ್ತವೆ. ಯಾವುದೇ ನಿಧಿಯನ್ನು ಪತ್ತೆ ಮಾಡಿದವರು ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದರೆ, ಅದರ ಮೌಲ್ಯದ ಆಧಾರದ ಮೇಲೆ ಅವರಿಗೆ ಬಹುಮಾನ ನೀಡುವ ಅವಕಾಶ ಕಾನೂನಿನಲ್ಲಿ ಇದೆ. ಜಿಲ್ಲಾಧಿಕಾರಿಗಳು ಮೊದಲು ನೋಟಿಸ್ ಹೊರಡಿಸಿ, ಯಾರಿಗಾದರೂ ಮಾಲೀಕತ್ವದ ಹಕ್ಕುಗಳಿದ್ದರೆ ಅದನ್ನು ಸಾಬೀತುಪಡಿಸಲು ಅವಕಾಶ ನೀಡುತ್ತಾರೆ. ಆದರೆ, 100 ವರ್ಷಕ್ಕಿಂತ ಹಳೆಯದಾದ ನಿಧಿಗೆ ಮಾಲೀಕತ್ವ ಸಾಧಿಸುವುದು ಅಸಾಧ್ಯ. ಪುರಾತತ್ವಶಾಸ್ತ್ರಜ್ಞರು, ನಾಣ್ಯಶಾಸ್ತ್ರಜ್ಞರು ಮತ್ತು ಚಿನ್ನದ ಮೌಲ್ಯಮಾಪಕರು ಇದರ ಪ್ರಾಚೀನತೆ ಮತ್ತು ಮೌಲ್ಯವನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ