AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM Vs Former CM | ಬಿಜೆಪಿ ಮಾಡುತ್ತಿರುವ ಆರೋಪಗಳ ಜೊತೆ ನಾವು ಮಾಡಿರುವ 40% ಕಮೀಶನ್ ಆರೋಪದ ತನಿಖೆಯೂ ನಡೆಯಲಿ: ಸಿದ್ದರಾಮಯ್ಯ

CM Vs Former CM | ಬಿಜೆಪಿ ಮಾಡುತ್ತಿರುವ ಆರೋಪಗಳ ಜೊತೆ ನಾವು ಮಾಡಿರುವ 40% ಕಮೀಶನ್ ಆರೋಪದ ತನಿಖೆಯೂ ನಡೆಯಲಿ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 24, 2023 | 2:48 PM

Share

ನಾವು ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರು, ಆಗ್ಯಾಕೆ ಅವರು ಈ ಆರೋಪಗಳನ್ನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರಗಳ ಪ್ರಕರಣಗನ್ನು ಲೋಕಾಯುಕ್ತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಕೇವಲ ನಮ್ಮ ಮೇಲೆ ಅವರು ಈಗ ಮಾಡುತ್ತಿರುವ ಪ್ರಕರಣಗಳನ್ನು ಮಾತ್ರ ಅಲ್ಲ, ಸರ್ಕಾರದ ವಿರುದ್ಧ ನಾವು ಮಾಡಿರುವ 40% ಕಮೀಶನ್ (commission) ಆರೋಪಗಳನ್ನೂ ಲೋಕಾಯುಕ್ತರಿಗೆ ಒಪ್ಪಿಸಲಿ. ಅಥವಾ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಿ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಹೇಳಿದರು. ನಾವು ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರು, ಆಗ್ಯಾಕೆ ಅವರು ಈ ಆರೋಪಗಳನ್ನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ