AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷಯ ತಿರುಚುವುದು ಬೇಡ, ಹಿಂದೆ ನಡೆದ ಘಟನೆಗಳನ್ನಷ್ಟೇ ಮತದಾರನ ಮುಂದಿಡೋಣ: ಡಿಕೆ ಶಿವಕುಮಾರ್

ವಿಷಯ ತಿರುಚುವುದು ಬೇಡ, ಹಿಂದೆ ನಡೆದ ಘಟನೆಗಳನ್ನಷ್ಟೇ ಮತದಾರನ ಮುಂದಿಡೋಣ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Apr 10, 2024 | 2:59 PM

Share

ನಾವು ಹೇಳಿದ್ದನ್ನೆಲ್ಲ ನಂಬಲು ಮತದಾರ ಮೂರ್ಖನಲ್ಲ, ಹಿಂದೆ ನಡೆದ ಘಟನೆಗಳನ್ನು ಯಥಾವತ್ತಾಗಿ ಅವನ ಮುಂದಿಡೋಣ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಬಿಡಿ, ಆದರೆ ಸಿದ್ಧಾಂತಗಳನ್ನೇ ಬಲಿಕೊಟ್ಟು ಮೈತ್ರಿ ಬೆಳಸಬೇಕಾದ ಸ್ಥಿತಿ ದೇವೇಗೌಡರಿಗೆ ಈ ವಯಸ್ಸಲ್ಲಿ ಬಂದಿದ್ದಕ್ಕೆ ವ್ಯಥೆಯೆನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಮಾತಿನ ಕಾಳಗ ಜೋರು ಹಿಡಿಯುತ್ತಿದೆ. ಒಕ್ಕಲಿಗರನ್ನು ಒಗ್ಗೂಡಿಸುವ ಬಗ್ಗೆ ಮಾತಾಡಿದ ನಗರದಲ್ಲಿಂದು ಮಾತಾಡಿದ ಶಿವಕುಮಾರ್ ಯಾರು ಯಾರನ್ನೂ ಒಗ್ಗೂಡಿಸುತ್ತಿಲ್ಲ ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಹೇಳಿದರು. ಕುಮಾರಸ್ವಾಮಿ ಅವರು ಮೂಲ ವಿಷಯವನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ (coalition government) ಮುಖ್ಯಮಂತ್ರಿಯಾಗಿದ್ದ ಅವರನ್ನು ಕೆಳಗಿಳಿಸಿದ ಜನರನ್ನೇ ಸ್ವಾಮೀಜಿಗಳ ಬಳಿ ಕರೆದೊಯ್ದು ಅವರ ಬೆಂಬಲ ಕೋರಿದರೆ ಅದನ್ನು ಅನುಕೂಲಸಿಂಧು ರಾಜಕಾರಣ ಅನ್ನಲ್ಲವೇ ಎಂದು ಶಿವಕುಮಾರ್ ಹೇಳಿದರು. ಯಾವುದನ್ನೂ ತಿರುಚುವುದು ಬೇಡ ಇತಿಹಾಸದಲ್ಲಿ ಏನು ನಡೆಯಿತು ಅನ್ನೋದನ್ನಷ್ಟೇ ಜನರ ಮುಂದೆ ಇಡೋಣ, ನಾವು ಹೇಳಿದ್ದನ್ನೆಲ್ಲ ನಂಬಲು ಮತದಾರ ಮೂರ್ಖನಲ್ಲ, ಹಿಂದೆ ನಡೆದ ಘಟನೆಗಳನ್ನು ಯಥಾವತ್ತಾಗಿ ಅವನ ಮುಂದಿಡೋಣ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಬಿಡಿ, ಆದರೆ ಸಿದ್ಧಾಂತಗಳನ್ನೇ ಬಲಿಕೊಟ್ಟು ಮೈತ್ರಿ ಬೆಳಸಬೇಕಾದ ಸ್ಥಿತಿ ದೇವೇಗೌಡರಿಗೆ ಈ ವಯಸ್ಸಲ್ಲಿ ಬಂದಿದ್ದಕ್ಕೆ ವ್ಯಥೆಯೆನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಹಿಂದೂಗಳ ಹಬ್ಬಗಳ ಮೇಲೆಯೇ ಕಾಂಗ್ರೆಸ್ ಕಾಮಾಲೆ ಕಣ್ಣು: ಕುಮಾರಸ್ವಾಮಿ ತೋಟದ ಮನೆ ಮೇಲೆ ದಾಳಿಗೆ ಜೆಡಿಎಸ್ ಕಿಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.