AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal News: ಮುಖ್ಯಮಂತ್ರಿಗಳಿಗೆ ಶಾಸಕರು ಪತ್ರ ಬರೆದಿರುವುದು ಸತ್ಯ, ಅದರಲ್ಲಿ ತಪ್ಪೇನಿದೆ? ಬಸವರಾಜ ರಾಯರೆಡ್ಡಿ

Koppal News: ಮುಖ್ಯಮಂತ್ರಿಗಳಿಗೆ ಶಾಸಕರು ಪತ್ರ ಬರೆದಿರುವುದು ಸತ್ಯ, ಅದರಲ್ಲಿ ತಪ್ಪೇನಿದೆ? ಬಸವರಾಜ ರಾಯರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 25, 2023 | 7:29 PM

ಅಧಿವೇಶನದ ಕೊನೆಯ ದಿನ ಆಳಂದ ಶಾಸಕ ಬಿಆರ್ ಪಾಟೀಲ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ರಾಯರೆಡ್ಡಿ ಹೇಳಿದರು.

ಕೊಪ್ಪಳ: ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷದ 20 ಶಾಸಕರು ಪತ್ರ ಬರೆದಿರುವುದನ್ನು ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಇತರ ಕೆಲ ಸಚಿವರು ಅಲ್ಲಗಳೆದಿದ್ದರು. ಆದರೆ ಆ ಪತ್ರಕ್ಕೆ ಸಹಿಹಾಕಿರುವವರಲ್ಲಿ ಒಬ್ಬರಾಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಸತ್ಯವನ್ನು ಹೊರಗೆಡಗಿದ್ದು ಪತ್ರ ಬರೆದಿರುವುದು ನಿಜ ಆದರೆ, ವಿರೋಧ ಪಕ್ಷದ ನಾಯಕರು ಹೇಳುತ್ತಿರುವ ಸಂಗತಿಯೇನೂ ಪತ್ರದಲ್ಲಿ ಇಲ್ಲ ಎನ್ನುತ್ತಾರೆ. ಅವರು ಹೇಳುವ ಪ್ರಕಾರ ಅಧಿವೇಶನದ ಕೊನೆಯ ದಿನ ಆಳಂದ ಶಾಸಕ ಬಿಆರ್ ಪಾಟೀಲ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಸಚಿವರು ಮತ್ತು ಶಾಸಕರ ನಡುವೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಂದು ಸಂವಾದ ನಡೆಯುವಂತಾದರೆ ಚೆನ್ನಾಗಿರುತ್ತದೆ ಅಂತ ಪತ್ರದ ಬರೆದಿದ್ದಾರೆ, ಅದಕ್ಕೆ ಯಲಬುರ್ಗಾ ಶಾಸಕ ಕೂಡ ಸಹಿ ಹಾಕಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಸಮನ್ವಯತೆ ಉಂಟಾಗಲು ಶಾಸಕಾಂಗ ಸಭೆ ನಡೆಸುವಂತೆ ಶಾಸಕರು ಬಯಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಅದರಲ್ಲಿ ತಪ್ಪೇನಿದೆ ಅಂತ ಬಸವರಾಜ ರಾಯರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ