AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಅರವಿಂದ ಲಿಂಬಾವಳಿಯಿಂದ ಅವಮಾನಕ್ಕೆ ಗುರಿಯಾದ ಮಹಿಳೆ ಸಿದ್ದರಾಮಯ್ಯ ಬಳಿ ನೋವು ತೋಡಿಕೊಂಡರು

ಶಾಸಕ ಅರವಿಂದ ಲಿಂಬಾವಳಿಯಿಂದ ಅವಮಾನಕ್ಕೆ ಗುರಿಯಾದ ಮಹಿಳೆ ಸಿದ್ದರಾಮಯ್ಯ ಬಳಿ ನೋವು ತೋಡಿಕೊಂಡರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 4:43 PM

ಧಾರಾಕಾರ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಅವರನ್ನು ಭೇಟಿಯಾದ ಸದರಿ ಮಹಿಳೆ ಶಾಸಕರ ದುರ್ವರ್ತನೆಯನ್ನು ವಿವರಿಸಿದರು.

Bengaluru: ಇತ್ತೀಚಿಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಸರ್ಕಾರೀ ಜಾಗವನ್ನು ಒತ್ತುವರಿ (Encroachment) ಮಾಡಿಕೊಂಡಿರುವರೆಂದು ಆರೋಪಿಸಿ ಸಾರ್ವಜನಿಕವಾಗಿ ಅವರ ವಿರುದ್ಧ ರೇಗಾಡಿದ್ದು ಕನ್ನಡಿಗರಿಗೆಲ್ಲ ಗೊತ್ತಿದೆ. ಧಾರಾಕಾರ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಅವರನ್ನು ಭೇಟಿಯಾದ ಸದರಿ ಮಹಿಳೆ ಶಾಸಕರ ದುರ್ವರ್ತನೆಯನ್ನು ವಿವರಿಸಿದರು. ಶಾಸಕರು ಹಂಗೆಲ್ಲ ಮಾತಾಡಿದರಾ ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು