AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ಸುರಿದ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ

ಇದ್ದಕ್ಕಿದ್ದಂತೆ ಸುರಿದ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ

ಸುಷ್ಮಾ ಚಕ್ರೆ
|

Updated on:May 16, 2025 | 10:38 PM

Share

ವಾಶಿಮ್ ಮಾರುಕಟ್ಟೆಯಲ್ಲಿ ಅಕಾಲಿಕ ಮಳೆಯಿಂದ ಕೊಚ್ಚಿಹೋಗುತ್ತಿದ್ದ ನೆಲಗಡಲೆ ಕೊಯ್ಲು ಉಳಿಸಲು ಮಹಾರಾಷ್ಟ್ರದ ಯುವಕ ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾವಿರಾರು ಜನರನ್ನು ಭಾವುಕಗೊಳಿಸಿರುವ ಈ ದೃಶ್ಯದಲ್ಲಿ, ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ಮಾರುಕಟ್ಟೆ ಸಮಿತಿಯ ರೈತ ಯುವಕ ಅನಿರೀಕ್ಷಿತ ಭಾರೀ ಮಳೆಯಿಂದ ತಾನು ಬೆಳೆದ ನೆಲಗಡಲೆ ಅಥವಾ ಶೇಂಗಾಕಾಯಿಯನ್ನು ಉಳಿಸಲು ಒದ್ದಾಡುವುದನ್ನು ನೋಡಬಹುದು.

ಮುಂಬೈ, ಮೇ 16: ಬಿಸಿಲಿನ ಶಾಖ, ಶೀತ ಮತ್ತು ನಿಯಮಿತ ಕಾಲೋಚಿತ ಮಳೆಯನ್ನು ಸಹಿಸಿಕೊಂಡು ತಮ್ಮ ಬೆಳೆಗಳನ್ನು ಮಾರಲು ಮಾರುಕಟ್ಟೆಗೆ ಬಂದ ರೈತರು ಮಹಾರಾಷ್ಟ್ರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಆಶಯದೊಂದಿಗೆ ಮಾರುಕಟ್ಟೆಗೆ ಬಂದ ಅವರಿಗೆ ಅನಿರೀಕ್ಷಿತ ಮಳೆಯಿಂದ ಆತಂಕ ಶುರುವಾಗಿದೆ. ತಮ್ಮ ಬೆಳೆಗಳಿಗೆ ಸಾಕಷ್ಟು ಆಶ್ರಯ ಅಥವಾ ರಕ್ಷಣೆ ಲಭ್ಯವಿಲ್ಲದ ಕಾರಣ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾವನ್ನು ಕಾಪಾಡಿಕೊಳ್ಳಲು ಯುವಕ ಪರದಾಡುವ ವಿಡಿಯೋ ವೈರಲ್ ಆಗಿದೆ.

ಸಾವಿರಾರು ಜನರನ್ನು ಭಾವುಕಗೊಳಿಸಿರುವ ಈ ದೃಶ್ಯದಲ್ಲಿ, ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ಮಾರುಕಟ್ಟೆ ಸಮಿತಿಯ ರೈತ ಯುವಕ ಅನಿರೀಕ್ಷಿತ ಭಾರೀ ಮಳೆಯಿಂದ ತಾನು ಬೆಳೆದ ನೆಲಗಡಲೆ ಅಥವಾ ಶೇಂಗಾಕಾಯಿಯನ್ನು ಉಳಿಸಲು ಒದ್ದಾಡುವುದನ್ನು ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: May 16, 2025 10:38 PM
Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More