AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?

ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?

ಭಾವನಾ ಹೆಗಡೆ
|

Updated on: Jul 01, 2026 | 10:54 AM

Share

ನಗರದ ಕಂಕನಾಡಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮನೆ ಹಿಂಭಾಗದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಈ ಅವಘಡದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದು,ಓರ್ವ ಪುರುಷ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆರೆಮನೆಯವರು, ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ದುರಂತ ಸಂಭವಿಸಿದೆ. ಜೋರಾಗಿ ಶಬ್ಧ ಬಂದ ನಂತರ ಸ್ಥಳಕ್ಕೆ ಹೋಗಿ ನೋಡಿದೆವು. ನಾವು ಬರುವಷ್ಟರಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿತ್ತು. ದುರಾದೃಷ್ಟವಶಾತ್ ಯಾರನ್ನೂ ಬಚಾವು ಮಾಡಲು ಆಗಲಿಲ್ಲ. ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದೆವು. ಇಲ್ಲಿ ಇರುವ ಎಲ್ಲವೂ ಬಾಡಿಗೆ ಮನೆಗಳೇ ಆಗಿದ್ದು, ನಮ್ಮ ಕುಟುಂಬ ಹೊರತುಪಡಿಸಿ ಉಳಿದ 4 ಕುಟುಂಬ ದುರಂತಕ್ಕೀಡಾಗಿದೆ ಎಂದಿದ್ದಾರೆ.

ಮಂಗಳೂರು, ಜುಲೈ 01: ನಗರದ ಕಂಕನಾಡಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮನೆ ಹಿಂಭಾಗದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಈ ಅವಘಡದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದು,ಓರ್ವ ಪುರುಷ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನೆರೆಮನೆಯವರು, ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ದುರಂತ ಸಂಭವಿಸಿದೆ. ಜೋರಾಗಿ ಶಬ್ಧ ಬಂದ ನಂತರ ಸ್ಥಳಕ್ಕೆ ಹೋಗಿ ನೋಡಿದೆವು. ನಾವು ಬರುವಷ್ಟರಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿತ್ತು. ದುರಾದೃಷ್ಟವಶಾತ್ ಯಾರನ್ನೂ ಬಚಾವು ಮಾಡಲು ಆಗಲಿಲ್ಲ. ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದೆವು. ಇಲ್ಲಿ ಇರುವ ಎಲ್ಲವೂ ಬಾಡಿಗೆ ಮನೆಗಳೇ ಆಗಿದ್ದು, ನಮ್ಮ ಕುಟುಂಬ ಹೊರತುಪಡಿಸಿ ಉಳಿದ 4 ಕುಟುಂಬ ದುರಂತಕ್ಕೀಡಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us