ಲವ್ ಜಿಹಾದ್​ನಂತೆ ಮುಸಕುಧಾರಿಯ ಹಿಂದೆ ಮತಾಂಧರ ಒಂದು ದೊಡ್ಡ ಗ್ಯಾಂಗ್ ಇದೆ: ಅರ್ ಅಶೋಕ

Updated on: Aug 25, 2025 | 6:44 PM

ಪ್ರಗತಿಪರರು ಅಂತ ಹೇಳಿಕೊಡು ಸಿದ್ದರಾಮಯ್ಯರ ಕಚೇರಿಗೆ ತೆರಳಿ ಅವರನ್ನು ನಂಬಿಸಿದ್ದ ಜನ ಈಗ ಕಣ್ಮರೆಯಾಗಿದ್ದಾರೆ, ಧರ್ಮಸ್ಥಳದಲ್ಲಿ ನಡೆಸಿದ ಉತ್ಖನನ ಮತ್ತು ಬೇರೆ ಕಾರ್ಯಗಳಿಗಾಗಿ ₹ 2-3 ಕೋಟಿ ಖರ್ಚಾಗಿದೆ, ಇದು ನಿಯತ್ತಿನಿಂದ ತೆರಿಗೆ ಪಾವತಿಸುವ ಜನರ ದುಡ್ಡು, ಯಾವನೋ ದಾರಿಹೋಕ ದೂರಿದ್ದಕ್ಕೆ ಎಸ್ಐಟಿ ರಚನೆ ಮಾಡಲಾಯಿತು, ಸರ್ಕಾರಕ್ಕೆ ಧರ್ಮಸ್ಥಳವನ್ನು ಸರ್ಕಾರೀಕರಣ ಮಾಡೋದು ಬೇಕಾಗಿದೆ ಅಂತ ಅಶೋಕ ಹೇಳಿದರು.

ಕೊಪ್ಪಳ, ಆಗಸ್ಟ್ 25: ಕೊಪ್ಪಳ ಪ್ರವಾಸದಲ್ಲಿರುವ ಹಿರಿಯ ಬಿಜೆಪಿ ನಾಯಕ ಆರ್ ಅಶೋಕ ಅವರು ಧರ್ಮಸ್ಥಳದ ಬುರುಡೆ ಪುರಾಣವನ್ನು ಲವ್ ಜಿಹಾದ್​ಗೆ ಹೋಲಿಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಇದೊಂಥರಾ ಮತಾಂಧರ ಜಿಹಾದ್, ಮತಾಂಧರ ಹಿಂದೆ ದೊಡ್ಡ ಗ್ಯಾಂಗ್ ಇದೆ, ಮುಸುಕುಧಾರಿಗೆ ಮುಸುಕು ಹಾಕಿದ್ದು ಸಿದ್ದರಾಮಯ್ಯ ಸರ್ಕಾರ ಅದರೆ ಮುಸುಕುಧಾರಿಗಳು ಸರ್ಕಾರಕ್ಕೆ ಮುಸುಕು ಹಾಕಿದರು ಎಂದು ಹೇಳಿದರು. ಅಸ್ತಿತ್ವವೇ ಇಲ್ಲದ ಅನನ್ಯ ಭಟ್ ತಮ್ಮ ಮಗಳು ಅಂತ ಎಲ್ಲರ ತಲೆ ಮೇಲೆ ಗೂಬೆ ಕೂರಿಸಿದ ಸುಜಾತಾ ಭಟ್ ಸೇರಿದಂತೆ ಎಲ್ಲರ ಬಣ್ಣ ಬಯಲಾಗುತ್ತಿದೆ, ಅವರೆಲ್ಲ ಕಂಬಿ ಎಣಿಸುವ ದಿನ ದೂರವಿಲ್ಲ ಎಂದು ಅಶೋಕ್ ಹೇಳಿದರು.

ಇದನ್ನೂ ಓದಿ:  ಧರ್ಮಸ್ಥಳ ಕೇಸ್: ಯುಟ್ಯೂಬರ್ ಸಮೀರ್ ಖಜಾನೆಗೆ ಕೈ ಹಾಕಿದ ಖಾಕಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 25, 2025 05:49 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More