ನನ್ನ ಮೇಲೆ ಪ್ರೀತಿ ಇಲ್ಲ ಎಂದ ಸಿಎಂ, ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ ಸಚಿವ

Updated on: Sep 26, 2025 | 7:53 PM

ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ‌ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.

ಬೆಂಗಳೂರು, (ಸೆಪ್ಟೆಂಬರ್ 26): ಬೆಂಗಳೂರಿನ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದ ವೇಳೆ ಸಿಎಂ ಹಾಗೂ ಸಚಿವರ ನಡುವೆ ಸ್ವಾರಸ್ಯಕರ ಮಾತುಗಳು ನಡೆದ ಪ್ರಸಂಗ ನಡೆದಿದೆ. ಸಿಎಂ ಮೇಲೆ ಸಚಿವ ಸುಧಾಕರ್ ಗೆ ಹೆಚ್ಚಿನ ಪ್ರೀತಿ ಇದೆ ಎಂದು ಶಾಸಕ‌ ಗೋವಿಂದಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ನನ್ನ ಮೇಲೆ ಪ್ರೀತಿ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಆಗ ಕೂಡಲೇ ಸಚಿವ ಸುಧಾಕರ್ ಬೆಳಗುತ್ತಿದ್ದ ಜ್ಯೋತಿ ಮೇಲೆ ಕೈಯಿಟ್ಟು ಪ್ರಮಾಣ ನಿಮ್ಮ ಮೇಲೆ ತುಂಬ ಪ್ರೀತಿ ಇದೆ ಸರ್ ಎಂದಿದ್ದಾರೆ. ಬಳಿಕ ಸಿಎಂ, ಸುಧಾಕರ್ ತಲೆ ಸವರಿ ನಗೆ ಚಟಾಕೆ ಹಾರಿಸಿದರು.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More