ರೈತರಿಗೆ ಗುಡ್ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಹೌದು..ಕಳೆದ ಕೆಲ ದಿನಗಳಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ ಮಾತನಾಡಿದ್ದು, ರಾಜ್ಯದ ಹಲವು ಕಡೆ ಮಾನ್ಸೂನ್ ಮಳೆಯಾಗಲಿದೆ. ಜೂನ್ ಮೊದಲೇ ವಾರದಲ್ಲಿ ನೈನೃತ್ಯ ಮಾನ್ಸೂನ್ ಆರಂಭವಾಗಲಿದೆ. 60-100 ಸೆಂಟಿಮೀಟರ್ ನಷ್ಟು ಮಳೆಯ ಸಾಧ್ಯತೆ ಇದೆ ಎಂದಿದ್ದಾರೆ.
ಬೆಂಗಳೂರು, (ಮೇ 18): ಕರ್ನಾಟಕದಲ್ಲಿ ಪೂರ್ವ ಮುಂಗಾರು (Monsoon Rain) ಚುರುಕುಗೊಂಡಿದೆ. ಹೌದು..ಕಳೆದ ಕೆಲ ದಿನಗಳಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ ಮಾತನಾಡಿದ್ದು, ರಾಜ್ಯದ ಹಲವು ಕಡೆ ಮಾನ್ಸೂನ್ ಮಳೆಯಾಗಲಿದೆ. ಜೂನ್ ಮೊದಲೇ ವಾರದಲ್ಲಿ ನೈನೃತ್ಯ ಮಾನ್ಸೂನ್ ಆರಂಭವಾಗಲಿದ್ದು, 60-100 ಸೆಂಟಿಮೀಟರ್ ನಷ್ಟು ಮಳೆಯ ಸಾಧ್ಯತೆ ಇದೆ. ವಿನ್ಸ್ ಕನ್ವರ್ಷನ್ ಪ್ರಮಾಣ ಹೆಚ್ಚಿರುವ ಕಾರಣ ಬಂಗಾಳ ಕೊಲ್ಲಿಯಲ್ಲಿ ಗಾಳಿ ಪ್ರಮಾಣ ಜಾಸ್ತಿ ಇರುತ್ತೆ. ಇದರಿಂದ ರಾಜ್ಯದಲ್ಲಿ ಮೇ 18ರ ಬಳಿಕ ಮಳೆ ಆಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲಿ ಎಲ್ ನೀನು ಪರಿಣಾಮ ಬೀರಲಿದೆ ಎಂದಿದ್ದಾರೆ. ಇನ್ನು ಹವಾಮಾನ ತಜ್ಞ ಪಾಟೀಲ ಅವರು ಕರ್ನಾಟಕದ ಹವಾಮಾನ ಹಾಗೂ ಮುಂಗಾರು ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.


