AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಕಳೀಪುರಂ ಕ್ಷೇತ್ರದ ಶಾಸಕನನ್ನು ಅಂಡರ್​ಪಾಸ್​ಗೆ ಕರೆತಂದು ಉಗಿಯಬೇಕೆಂದ ಅಟೋರಿಕ್ಷಾ ಚಾಲಕ

ಓಕಳೀಪುರಂ ಕ್ಷೇತ್ರದ ಶಾಸಕನನ್ನು ಅಂಡರ್​ಪಾಸ್​ಗೆ ಕರೆತಂದು ಉಗಿಯಬೇಕೆಂದ ಅಟೋರಿಕ್ಷಾ ಚಾಲಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 15, 2024 | 2:10 PM

Share

ಕೇವಲ ಎಂಎಲ್​ಎ ಮಾತ್ರವಲ್ಲ, ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನೂ ಆಟೋರಿಕ್ಷಾ ಡ್ರೈವರ್ ತೆಗಳುತ್ತಾರೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಸೂಟುಬೂಟು ಧರಿಸಿ ಕುಣಿದಾಡಿದ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರೂ ಹೌದು. ಅವರೇ ಆಟೋರಿಕ್ಷಾ ಚಾಲಕನಿಗೆ ಉತ್ತರಿಸಬೇಕು.

ಬೆಂಗಳೂರು: ನಗರದಲ್ಲಿ ಮಳೆಯಾದರೆ ರಸ್ತೆಗಳು ನದಿಗಳಾಗುತ್ತವೆ ಮತ್ತು ಅಂಡರ್​ಪಾಸ್​ಗಳು ಸ್ವಿಮ್ಮಿಂಗ್ ಪೂಲ್​ಗಳಾಗಿ ಮಾರ್ಪಡುತ್ತವೆ. ಸರ್ಕಾರ ಯಾವುದೇ ಇರಲಿ ಜನರ ಬವಣೆ ತಪ್ಪಲ್ಲ. ಓಕಳೀಪುರಂ ಅಂಡರ್​ಪಾಸ್ ಜಲಾವೃತಗೊಂಡಿರರುವ ಸುದ್ದಿಯನ್ನು ಈಗಾಗಲೇ ನೀಡಿಯಾಗಿದೆ. ಅಲ್ಲಿಂದ ಹಾದು ಬರುತ್ತಿರುವ ಜನರ ಪ್ರತಿಕ್ರಿಯೆಗಳನ್ನು ಒಂದಷ್ಟು ಕೇಳಿ. ಈ ಕ್ಷೇತ್ರದ ಶಾಸಕನನ್ನು ಮನಸಾರೆ ಉಗಿಯಬೇಕೆಂದು ಒಬ್ಬ ಆಟೋರಿಕ್ಷಾ ಡ್ರೈವರ್ ಬಹಳ ಬೇಸರದಿಂದ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More