AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಇರುವ ಗೌರವವನ್ನು ಮತ್ತೊಮ್ಮೆ ಪ್ರದರ್ಶಿಸಿದ ಸಂಸದ ಪ್ರತಾಪ್ ಸಿಂಹ

ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಇರುವ ಗೌರವವನ್ನು ಮತ್ತೊಮ್ಮೆ ಪ್ರದರ್ಶಿಸಿದ ಸಂಸದ ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: May 11, 2024 | 3:53 PM

Share

ಅಲ್ಲಿದ್ದವರಿಗೆಲ್ಲ ನಮಸ್ಕರಿಸುತ್ತಾ ಸಿದ್ದರಾಮಯ್ಯ ತಮ್ಮ ಹತ್ತಿರ ಬಂದಾಗ ಪ್ರತಾಪ್ ಸಿಂಹ ಮುಖ್ಯಮಂತ್ರಿಯವರ ಪಾದಮುಟ್ಟಿ ನಮಸ್ಕರಿಸುತ್ತಾರೆ. ಕೂಡಲೇ ಪ್ರತಾಪ್ ಕೈಗಳನ್ನು ಹಿಡಿದು ಮೇಲೆತ್ತುವ ಸಿದ್ದರಾಮಯ್ಯ ಸ್ವಲ್ಪ ಸಮಯದವರೆಗೆ ಆತ್ಮೀಯವಾಗಿ ಸಂಸದನ ಹೆಗಲ ಮೇಲೆ ಕೈ ಇಡುತ್ತಾರೆ. ಪ್ರತಾಪ್ ಮುಖದಲ್ಲಿ ಧನ್ಯತೆಯ ಭಾವ ಗಮನಿಸಬಹುದು.

ಮೈಸೂರು: ಸಂಸದ ಪ್ರತಾಪ್ ಸಿಂಹ (MP Pratap Simha) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಎಷ್ಟೇ ಟೀಕಿಸಿದರೂ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವುದರಲ್ಲಿ ಎರಡು ಮಾತಿಲ್ಲ. ನಗರದ ಅಶೋಕಪುರಂನಲ್ಲಿರುವ ಡಾ ಬಿ ಅರ್ ಅಂಬೇಡ್ಕರ್ ಪ್ರತಿಷ್ಠಾನದಲ್ಲಿ ಇಂದು ಅಯೋಜಿಸಲಾಗಿದ್ದ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಅವರ ನುಡಿನಮನ ಕಾರ್ಯಕ್ರಮದಲ್ಲಿ ಅದು ಮತ್ತೊಮ್ಮೆ ಸಾಬೀತಾಯಿತು. ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಸಿದ್ದರಾಮಯ್ಯ ವೇದಿಕೆ ಮೇಲೆ ಆಗಮಿಸಿದಾಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಎದ್ದು ನಿಲ್ಲುತ್ತಾರೆ. ಅಲ್ಲಿದ್ದವರಿಗೆಲ್ಲ ನಮಸ್ಕರಿಸುತ್ತಾ ಸಿದ್ದರಾಮಯ್ಯ ತಮ್ಮ ಹತ್ತಿರ ಬಂದಾಗ ಪ್ರತಾಪ್ ಸಿಂಹ ಮುಖ್ಯಮಂತ್ರಿಯವರ ಪಾದಮುಟ್ಟಿ ನಮಸ್ಕರಿಸುತ್ತಾರೆ. ಕೂಡಲೇ ಪ್ರತಾಪ್ ಕೈಗಳನ್ನು ಹಿಡಿದು ಮೇಲೆತ್ತುವ ಸಿದ್ದರಾಮಯ್ಯ ಸ್ವಲ್ಪ ಸಮಯದವರೆಗೆ ಆತ್ಮೀಯವಾಗಿ ಸಂಸದನ ಹೆಗಲ ಮೇಲೆ ಕೈ ಇಡುತ್ತಾರೆ. ಪ್ರತಾಪ್ ಮುಖದಲ್ಲಿ ಧನ್ಯತೆಯ ಭಾವ ಗಮನಿಸಬಹುದು. ನಂತರ ತಮ್ಮ ಆಸನದ ಬಳಿಗೆ ವಾಪಸ್ಸು ಬರುವ ಸಿದ್ದರಾಮಯ್ಯನವರು ಯಡಿಯೂರಪ್ಪನವರ ಮುಂದಿದ್ದ ಟೀಪಾಯ್ ಮೇಲೆ ನೀರಿನ ಬಾಟಲ್ ಒಂದು ಅಡ್ಡ ಬಿದ್ದಿರುವುದನ್ನು ಗಮನಿಸಿ ಅದನ್ನು ನೆಟ್ಟಗೆ ನಿಲ್ಲಿಸುತ್ತಾರೆ. ಅವರ ಕ್ರಿಯೆಯನ್ನು ಯಡಿಯೂರಪ್ಪ ತದೇಕಚಿತ್ತದಿಂದ ನೋಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವರಿಷ್ಠರು ಯದುವೀರ್​ಗೆ ಟಿಕೆಟ್ ನೀಡಿದ್ದರೂ ಪ್ರತಾಪ್ ಸಿಂಹಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಕಾದಿದೆ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.