AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿಯ ಹಾಗೆ ಮಗನನ್ನು ಕೊಚ್ಚಿ ಹಾಕಿದ್ದಾರೆ, ನನ್ನ ಮಗ ಕೆಟ್ಟವನಲ್ಲ: ವಿಜಯಲಕ್ಷ್ಮಿ, ಬಿಕ್ಲು ಶಿವ ತಾಯಿ

ಕುರಿಯ ಹಾಗೆ ಮಗನನ್ನು ಕೊಚ್ಚಿ ಹಾಕಿದ್ದಾರೆ, ನನ್ನ ಮಗ ಕೆಟ್ಟವನಲ್ಲ: ವಿಜಯಲಕ್ಷ್ಮಿ, ಬಿಕ್ಲು ಶಿವ ತಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 17, 2025 | 1:21 PM

Share

ಅವನನ್ನು ಕೊಂದಿದ್ದು ಯಾರು ಅಂತ ತನಗೆ ಗೊತ್ತಿಲ್ಲ, ಅದರೆ ಜಗ ಎನ್ನನುವವನು ಮಾತ್ರ ತನ್ನ ಕುಟುಂಬದೊಂದಿಗೆ ಆತ್ಮೀಯವಾಗಿದ್ದ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಮನೆಯೊಳಗೆ ನೀವು ಕಾವಲು ಮತ್ತು ಮನೆ ಹೊರಗಡೆ ನಾನು ಕಾವಲು ಎಂದು ಹೇಳುತ್ತಿದ್ದ. ಆದರೆ, ಅವನಿಗೆ ಇತ್ತೀಚಿಗೆ ಬಹಳ ದುಡ್ಡು ಬಂದಿತ್ತು ಅಂತ ತನ್ನ ಮಗ ಹೇಳುತ್ತಿದ್ದ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

ಬೆಂಗಳೂರು, ಜುಲೈ 17: ಮಂಗಳವಾರ ಬರ್ಬರವಾಗಿ ಹತ್ಯೆಯಾದ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರೂ ಮಗನ ಕೊಲೆಯ ಬಗ್ಗೆ ಮಾತಾಡುತ್ತಿದ್ದಾರೆ. ಶಿವಪ್ರಕಾಶ್ ಕೊಲೆಯ ಬರ್ಬರತೆಯನ್ನು ಹೇಳುವ ಅವರು ಕುರಿಯನ್ನು ಕಟ್ ಮಾಡುವ ಹಾಗೆ ಅವನನ್ನು ಕೊಯ್ದಿದ್ದಾರೆ, ಖೀಮಾ ಥರ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ ಎಂದು ಹೇಳುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಮಗ ಕೊಲೆಯಾದ ದಿನ ಫೋನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದವನು ಹಾಗೆಯೇ ಹೊರಗೆ ಹೋದ. ಸ್ವಲ್ಪ ಹೊತ್ತಿನ ಬಳಿಕ ಜನ ಕೂಗಾಡೋದು ಕೇಳಿಸಿತು. ತಾನು ಹೋಗಿ ನೋಡಿದಾಗ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗೊತ್ತಾಯಿತು ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

ಇದನ್ನೂ ಓದಿ:   ಬೆಂಗಳೂರಿನಲ್ಲಿ ರೌಡಿಶೀಟರ್​ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ