AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಾ ಸಿಂಪಲ್‌ ವ್ಯಕ್ತಿ;  ಎಸ್‌ ಎಲ್‌ ಭೈರಪ್ಪ ಅವರ ಬಗ್ಗೆ ಪಕ್ಕದ ಮನೆಯವ್ರ ಮಾತು

ತುಂಬಾ ಸಿಂಪಲ್‌ ವ್ಯಕ್ತಿ; ಎಸ್‌ ಎಲ್‌ ಭೈರಪ್ಪ ಅವರ ಬಗ್ಗೆ ಪಕ್ಕದ ಮನೆಯವ್ರ ಮಾತು

TV9 Web
| Edited By: |

Updated on: Sep 24, 2025 | 6:14 PM

Share

ನಾಡಿನ ಹಿರಿಯ ಸಾಹಿತಿ ಎಸ್.‌ಎಲ್‌ ಭೈರಪ್ಪ ಅವರು ತಮ್ಮ 94 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನದಿಂದ ನಾಡಿನ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅವರ ಪಕ್ಕದ ಮನೆಯವ್ರು ಕೂಡಾ ಸಂತಾಪ ವ್ಯಕ್ತಪಡಿಸಿ, ಭೈರಪ್ಪ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ.

ಮೈಸೂರು, ಸೆಪ್ಟೆಂಬರ್‌ 24: ನಾಡಿನ ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕಾದಂಬರಿಕಾರ ಎಸ್‌. ಎಲ್‌ ಭೈರಪ್ಪ (SL Bhyrappa) ಅವರು ತಮ್ಮ 94 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅವರ ಪಕ್ಕದ ಮನೆಯವರು ಕೂಡಾ ಸಂತಾಪ ಸೂಚಿಸಿ, ಭೈರಪ್ಪ ಅವರ ವ್ಯಕ್ತಿತ್ವದ ಬಗ್ಗೆ ಒಂದಷ್ಟು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಭೈರಪ್ಪ ಅವರು ಶ್ರೇಷ್ಠ ಸಾಹಿತಿ ಮಾತ್ರವಲ್ಲದೆ ಒಂದೊಳ್ಳೆ ಮನಸ್ಸಿನ ವ್ಯಕ್ತಿ ಕೂಡ ಹೌದು. ಅವರು ಹೇಗಪ್ಪಾ ಅಂದ್ರೆ ರಸ್ತೆಯಲ್ಲಿ ಯಾರು ಸಿಕ್ಕರೂ ಕೂಡಾ ತುಂಬಾ ಚೆನ್ನಾಗಿ ಮಾತಾಡ್ಸೋರು. ಅವರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ