ನಂದಿನಿ ಮತ್ತು ಅಮುಲ್ ರೈತರು ಹುಟ್ಟುಹಾಕಿರುವ ಸಂಸ್ಥೆಗಳು, ಎರಡೂ ನಮ್ಮವೇ: ಸಿಟಿ ರವಿ, ಬಿಜೆಪಿ ಎಮ್ಮೆಲ್ಸಿ
ಅಮುಲ್ ಮತ್ತು ನಂದಿನಿ ಎರಡಕ್ಕೂ ಸ್ವಂತ ಸಾಮರ್ಥ್ಯದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡ್ಡಿಂಗ್ ಮಾಡಿ ಗೆಲ್ಲುವಷ್ಟು ಕ್ಷಮತೆ ಇದೆ. ಬೇರೆ ರಾಷ್ಟ್ರಗಳಲ್ಲೂ ನಂದಿನಿ ತನ್ನ ಮಳಿಗೆಗಳನ್ನು ಸ್ಥಾಪಿಸಲಿ ಎಂಬ ಸದುದ್ದೇಶವನ್ನು ತಾನು ಹೊಂದಿದ್ದೇನೆ, ಅದು ಈಗಾಗಲೇ ತನ್ನ ಮಳಿಗೆಗಳನ್ನು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸ್ಥಾಪಿಸಿದೆ, ಸಂಸ್ಥೆಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ರವಿ ಹೇಳಿದರು.
ಬೆಂಗಳೂರು, ಜೂನ್ 18: ನಂದಿನಿ ಮಳಿಗೆಗಳು (Nandini kiosks) ಮೆಟ್ರೋ ಸ್ಟೇಶನ್ಗಳಲ್ಲಿ ಕಾಣಲಿವೆ, ಶೇಕಡ 80 ಸ್ಟೇಶನ್ಗಳಲ್ಲಿ ನಂದಿನಿ ಹಾಲು ಉತ್ಪಾದನೆಯ ಪ್ರಾಡಕ್ಟ್ಗಳ ಕಿಯಾಸ್ಕ್ಗಳು ಮತ್ತು ಶೇಕಡಾ 20ರಷ್ಟು ಸ್ಟೇಶನ್ಗಳಲ್ಲಿ ಮಾತ್ರ ಅಮುಲ್ ಉತ್ಪಾದನೆಯ ಕಿಯಾಸ್ಕ್ಗಳು ಬರಲಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ನಂದಿನಿ ಮತ್ತು ಅಮುಲ್ ಎರಡೂ ರೈತರ ಸಂಸ್ಥೆಗಳು, ಒಂದು ರಾಜ್ಯದ ಸಂಸ್ಥೆಯಾದರೆ ಮತ್ತೊಂದು ದೇಶದ ಸಂಸ್ಥೆ, ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯವನ್ನು ತಾನು ಮಾಡಲಾರೆ, ಎರಡೂ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: KMF Nandini: ರಾಜಸ್ಥಾನ, ಮಧ್ಯ ಪ್ರದೇಶದಲ್ಲೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್ ಸಿದ್ಧತೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ