ನೇಪಾಳದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,259ಕ್ಕೆ ಏರಿಕೆ, 5 ಸಾವಿರ ಜನರಿಗಾಗಿ ಹುಡುಕಾಟ

Updated on: Sep 03, 2026 | 10:18 PM

ನೇಪಾಳದಲ್ಲಿ ಉಂಟಾಗಿರುವ ಜಲಪ್ರಳಯಕ್ಕೆ ಸ್ಪಂದಿಸಿರುವ ಭಾರತ ಸರ್ಕಾರವು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಸಂಕಷ್ಟದಲ್ಲಿರುವ ನೇಪಾಳಕ್ಕೆ ಭಾರತವು ಆಪರೇಷನ್ ಮಾದರಿಯಲ್ಲಿ ಸಹಾಯ ಹಸ್ತ ಚಾಚಿದೆ. ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ಗಳು ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್​ಡಿಆರ್​ಎಫ್) ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ರಕ್ಷಣಾ ಸಾಮಗ್ರಿಗಳು, ವೈದ್ಯಕೀಯ ನೆರವು, ಆಹಾರ ಮತ್ತು ನೀರು ಪೂರೈಕೆ ವಸ್ತುಗಳನ್ನು ಭಾರತದಿಂದ ನೇಪಾಳಕ್ಕೆ ರವಾನಿಸಲಾಗುತ್ತಿದೆ.

ಕಠ್ಮಂಡು, ಸೆಪ್ಟೆಂಬರ್ 3: ನೇಪಾಳ ಮತ್ತು ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಹಿಮನದಿ ಕುಸಿತ ಹಾಗೂ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ ಇಂದು 1,259ಕ್ಕೆ ಏರಿಕೆಯಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ 5,083ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಚುರುಕಾಗಿದ್ದರೂ ಮಣ್ಣಿನ ರಾಶಿ ಹಾಗೂ ಜಲಾವೃತಗೊಂಡ ಜಲವಿದ್ಯುತ್ ಯೋಜನೆಗಳ ಟನೆಲ್‌ಗಳಲ್ಲಿ ನೂರಾರು ಜನ ಸಿಲುಕಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ನೇಪಾಳದ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಡಿಯೋ ಇಲ್ಲಿದೆ.

ನೇಪಾಳದಲ್ಲಿ ಉಂಟಾಗಿರುವ ಜಲಪ್ರಳಯಕ್ಕೆ ಸ್ಪಂದಿಸಿರುವ ಭಾರತ ಸರ್ಕಾರವು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಸಂಕಷ್ಟದಲ್ಲಿರುವ ನೇಪಾಳಕ್ಕೆ ಭಾರತವು ಆಪರೇಷನ್ ಮಾದರಿಯಲ್ಲಿ ಸಹಾಯ ಹಸ್ತ ಚಾಚಿದೆ. ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ಗಳು ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್​ಡಿಆರ್​ಎಫ್) ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ರಕ್ಷಣಾ ಸಾಮಗ್ರಿಗಳು, ವೈದ್ಯಕೀಯ ನೆರವು, ಆಹಾರ ಮತ್ತು ನೀರು ಪೂರೈಕೆ ವಸ್ತುಗಳನ್ನು ಭಾರತದಿಂದ ನೇಪಾಳಕ್ಕೆ ರವಾನಿಸಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us