ನಟ ದರ್ಶನ್ (Darshan) ಈಗ ಜೈಲು ಪಾಲಾಗಿರುವ ಬಗ್ಗೆ ಅವರ ಆಪ್ತರು ಹಾಗೂ ಅಭಿಮಾನಿಗಳಿಗೆ ಬೇಸರ ಇದೆ. ಚಿತ್ರರಂಗದಲ್ಲಿ ಅನೇಕರ ಜೊತೆ ದರ್ಶನ್ಗೆ ಉತ್ತಮ ಒಡನಾಟ ಇತ್ತು. ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ದರ್ಶನ್ ಅಪಾರ ಗೌರವ ನೀಡುತ್ತಿದ್ದರು. ಒಂದು ವೇಳೆ ಇಂದು ಅಂಬರೀಶ್ (Ambareesh) ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂಬ ಬಗ್ಗೆ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ. ‘ಅಂಬರೀಶಣ್ಣ ಇದ್ದಿದ್ರೆ ದರ್ಶನ್ ಕಪಾಳಕ್ಕೆ ಹೊಡೆಯುತ್ತಿದ್ದರು. ಕರೆದು ಬುದ್ಧಿ ಹೇಳುತ್ತಿದ್ದರು. ಬಾರೋ ಇಲ್ಲಿ.. ನೀನು ಮಾಡುತ್ತಿರುವುದು ತಪ್ಪು ಅಂತ ಖಂಡಿತಾ ಹೇಳಿರುತ್ತಿದ್ದರು. ಸುಮಲತಾ ಕೂಡ ಮಾತನಾಡುತ್ತಾರೆ. ಅದರ ಬಗ್ಗೆ ಅನುಮಾನ ಬೇಡ’ ಎಂದು ಓಂ ಪ್ರಕಾಶ್ ರಾವ್ (Om Prakash Rao) ಹೇಳಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಹತ್ಯೆ ಮಾಡಿದ ಆರೋಪದಿಂದ ದರ್ಶನ್ ಮತ್ತು ಅವರ ಸಹಚರರು ಜೈಲು ಸೇರಿದ್ದಾರೆ. ಈ ಕೇಸ್ನಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.