Onam 2023: ಕಾಲೇಜ್​ನಲ್ಲಿ ಮುಗಿಲು ಮುಟ್ಟಿದ ಓಣಂ ಸಂಭ್ರಮ- ಮಿರ ಮಿರ ಮಿಂಚಿದ ವಿದ್ಯಾರ್ಥಿನಿಯರು

ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

Onam 2023: ಕಾಲೇಜ್​ನಲ್ಲಿ ಮುಗಿಲು ಮುಟ್ಟಿದ ಓಣಂ ಸಂಭ್ರಮ- ಮಿರ ಮಿರ ಮಿಂಚಿದ ವಿದ್ಯಾರ್ಥಿನಿಯರು
| Updated By: ಸಾಧು ಶ್ರೀನಾಥ್​

Updated on: Aug 26, 2023 | 2:51 PM

ಅಲ್ಲಿನ ಕಾಲೇಜ್​ನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.. ಓಣಂ ನಿಮಿತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಪ್ರದಾಯ ಉಡುಗೆ ತೊಟ್ಟು ಮಿರ ಮಿರ ಮಿಂಚಿದ್ದಾರೆ.. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಮಸ್ತ್​ ಮಸ್ತ್​ ಡ್ಯಾನ್ಸ್​.. ಸೀರೆಯಲ್ಲಿ ಸಖತ್​ ಮಿಂಚಿಂಗ್​.. ನಾವೇನ್​ ಕಮ್ಮಿ ಅಂತ ಪಂಚೆ ತೊಟ್ಟು ಬಂದ ಪಡ್ಡೆ ಹುಡುಗರು.. ಫೋಟೋ ಕ್ರೇಜ್​.. ಬಿಂದಾಸ್​ ಭೋಜನ.. ಮದುವಣಗಿತ್ತಿ ಸಿಂಗಾರಗೊಂಡ ಕಾಲೇಜ್​.. ಮುಗಿಲು ಮುಟ್ಟಿದ ಸಂಭ್ರಮ..
ವಾವ್​.. ಅದೇನ್​ ಸಡಗರ.. ಅದೇನ್​ ವಯ್ಯಾರ ಅಂತೀರಾ.. ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇಷ್ಟೇ ಅಲ್ಲ ಹೂಗಳಿಂದ ರಂಗೋಲಿ ಹಾಕಿದ ಯುವತಿಯರು, ಅಲ್ಲಿಯೇ ಫೋಟೋಗೆ ಫೋಸ್​​ ಕೊಟ್ರು. ಈ ಸಂಭ್ರಮಗಳ ನಡುವೆ ಒಂದಿಷ್ಟು ಮನೋರಂಜನಾ ಕ್ರೀಡೆಗಳು ಗಮನ ಸೆಳೆದ್ವು. ಬಾಯಲ್ಲಿ ಸ್ಪೂನ್​ ಅದರ ಮೇಲೆ ನಿಂಬೆ ಇಟ್ಟುಕೊಂಡ ಯುವಕ, ಯುವತಿಯರು ವಾಕ್​ ಮಾಡಿದ್ರು. ಅಂತಿಮವಾಗಿ ಓಣಂ ಪ್ರಯುಕ್ತ ಭೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅನ್ನ ಸಾಂಬಾರ್, ವೆರೈಟಿ ವೆರೈಟಿ ಪಲ್ಯ ಇತರೆ ತಿನಿಸುಗಳನ್ನ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇವಲ ಕೇರಳದ ವಿದ್ಯಾರ್ಥಿಗಳು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆ, ಗುಜರಾತ್ ಸೇರಿದಂತೆ ಇತರ ರಾಜ್ಯದ ವಿದ್ಯಾರ್ಥಿಗಳು ಭಾಗಿಯಾಗಿ ಎಂಜಾಯ್ ಮಾಡಿದ್ರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಜತೆಗೆ ಅನೇಕತೆಯಲ್ಲಿ ಏಕತೆ ಅನ್ನೋ ಸಂದೇಶವನ್ನ ಮನವರಿಕೆ ಮಾಡ್ತಿರೋದು ಖುಷಿಯ ಸಂಗತಿ.

Follow us
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ