AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಕಳಿಸುವ ಬದಲು ಭಾರತದಲ್ಲೇ ಗುಂಡಿಕ್ಕಿ ಸಾಯಿಸಿಬಿಡಿ: ಭಾರತದಲ್ಲಿರುವ ಪಾಕಿಸ್ತಾನೀ ಹಿಂದೂಗಳು

ಪಾಕಿಸ್ತಾನಕ್ಕೆ ಕಳಿಸುವ ಬದಲು ಭಾರತದಲ್ಲೇ ಗುಂಡಿಕ್ಕಿ ಸಾಯಿಸಿಬಿಡಿ: ಭಾರತದಲ್ಲಿರುವ ಪಾಕಿಸ್ತಾನೀ ಹಿಂದೂಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 28, 2025 | 1:08 PM

ಠಾಕೂರ್ ಶೀತಲ್ ದಾಸ್ ರಾಮೋಜಿಯ ಕುಟುಂಬ 2018ರಿಂದ ಭಾರತದಲ್ಲಿ ವಾಸವಾಗಿದೆ ಮತ್ತು ವಾಪಸ್ಸು ಹೋಗಲು ಸುತಾರಾಂ ತಯಾರಿಲ್ಲ. ನಮ್ಮನ್ನು ವಾಪಸ್ಸು ಕಳಿಸುವ ಬದಲು ಇಲ್ಲೇ ಗುಂಡಿಟ್ಟು ಸಾಯಿಸಿ, ಅಲ್ಲಿಗೆ ಹೋದರೆ ಹೇಗೂ ಸಾಯುತ್ತೇವೆ , ಅದರ ಬದಲು ಭಾರತದಲ್ಲಿ ಸತ್ತ ನೆಮ್ಮದಿಯ ಭಾವದೊಂದಿಗಾದರೂ ಸಾಯುತ್ತೇವೆ ಎಂದು ರಾಮೋಜಿ ಹೇಳುತ್ತಾರೆ.

ಗುಜರಾತ್, ಏಪ್ರಿಲ್ 28: ಕೇವಲ ಪಾಕಿಸ್ತಾನಿ ಮುಸಲ್ಮಾನರು ಭಾರತಕ್ಕೆ ಬಂದು ನೆಲೆಸಿದ್ದಾರೆ ಅಂತ ಯಾರಾದರೂ ಭಾವಿಸಿದ್ದರೆ ಅದು ತಪ್ಪು ಗ್ರಹಿಕೆ. ಪಾಕಿಸ್ತಾನ ಗಡಿ ಭಾಗದ ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ (Gujarat and Rajasthan) ಪಾಕಿಸ್ತಾನದಿಂದ ಬಂದು ನೆಲೆಸಿರುವ ಕೆಲ ಹಿಂದೂ ಕುಟುಂಬಗಳೂ ಇವೆ. ಪಾಕಿಸ್ತಾನದಲ್ಲಿ ಹಿಂದೂಗಳಿರೋದು ಭಾರತೀಯರಿಗೆ ಗೊತ್ತಿರದ ಸಂಗತಿಯೇನಲ್ಲ. ಆ ದೇಶದಲ್ಲಿನ ಅರಾಜಕತೆ, ದುರಾಡಳಿತ, ಬದುಕು ನಡೆಸಲು ಸಹ್ಯವಲ್ಲದ ವಾತಾವರಣದಿಂದ ಬೇಸತ್ತು ಕೆಲ ಹಿಂದೂ ಕುಟುಂಬಗಳು ಭಾರತಕ್ಕೆ ಬಂದು ನೆಲೆಸಿವೆ. ಅದರೆ, ಪಹಲ್ಗಾಮ್ ದಾಳಿ ಮತ್ತು ಅದರ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನೀಯರು ತಮ್ಮ ದೇಶಕ್ಕೆ ಹಿಂತಿರುಗಬೇಕು ಎಂದು ಆದೇಶಿಸಿದ್ದು ಈ ಕುಟುಂಬಗಳಿಗೆ ಆಘಾತ ಮತ್ತು ಅತಂಕವನ್ನುಂಟು ಮಾಡಿದೆ.

ಇದನ್ನೂ ಓದಿ: ಶಸ್ತ್ರಾಸ್ತ್ರಗಳ ಹಿಡಿದು 22 ಗಂಟೆಗಳ ಕಾಲ ನಡೆದು ಕಾಡುಗಳ ಮೂಲಕ ಪಹಲ್ಗಾಮ್ ತಲುಪಿದ್ದ ಉಗ್ರರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ