AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಣ್ಯ ಫ್ಲೈಓವರ್​ ಬಂದ್​ನಿಂದ ವಾಹನ ಸವಾರರು ಕಂಗಾಲು: 10 ನಿಮಿಷದಲ್ಲಿ ಹೋಗೋ ದಾರಿಗೆ 1 ಗಂಟೆ ಬೇಕೆಂದು ಅಳಲು

ಪೀಣ್ಯ ಫ್ಲೈಓವರ್​ ಬಂದ್​ನಿಂದ ವಾಹನ ಸವಾರರು ಕಂಗಾಲು: 10 ನಿಮಿಷದಲ್ಲಿ ಹೋಗೋ ದಾರಿಗೆ 1 ಗಂಟೆ ಬೇಕೆಂದು ಅಳಲು

ಗಣಪತಿ ಶರ್ಮಾ
|

Updated on: May 05, 2026 | 11:12 AM

Share

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶಿವಕುಮಾರ ಸ್ವಾಮೀಜಿ ಫ್ಲೈಓವರ್) ಮೇಲೆ ಕೇಬಲ್ ದುರಸ್ತಿ ಮತ್ತು ಲೋಡ್ ಪರೀಕ್ಷೆಗಾಗಿ ನಾಲ್ಕು ದಿನಗಳ ಕಾಲ ಸಂಚಾರ ನಿರ್ಬಂಧ ಹೇರಲಾಗಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೆಚ್ಚು ಸಮಯ ವ್ಯಯಿಸಿ ಪರದಾಡುತ್ತಿದ್ದಾರೆ.

ಬೆಂಗಳೂರು, ಮೇ 5: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್​ನಲ್ಲಿ ನಾಲ್ಕು ದಿನಗಳ ಕಾಲ ಸಂಚಾರ ನಿರ್ಬಂಧ ಹೇರಲಾಗಿದ್ದು, ಇದು ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಡಾ. ಶಿವಕುಮಾರ ಸ್ವಾಮೀಜಿ ಫ್ಲೈಓವರ್ ಮೇ 8ರ ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರಕ್ಕೆ ಲಭ್ಯವಿರುವುದಿಲ್ಲ. ಫ್ಲೈಓವರ್‌ನಲ್ಲಿರುವ 1422 ಕೇಬಲ್‌ಗಳ ದುರಸ್ತಿ ಮತ್ತು ಲೋಡ್ ಪರೀಕ್ಷೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ಸಂಚರಿಸಬಹುದಾದ ಮಾರ್ಗವನ್ನು ಈಗ ಕೆಳರಸ್ತೆಯಲ್ಲಿ ಸಂಚರಿಸಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತಿದೆ ಎಂದು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ, ಮತ್ತು ಎಸ್‌ಆರ್‌ಎಸ್ ಜಂಕ್ಷನ್‌ಗಳ ಸುತ್ತಮುತ್ತ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us