ದಸರಾ ಹಬ್ಬಕ್ಕೆ ಊರಿನತ್ತ ಹೊರಟ ಜನ; ಬೆಂಗಳೂರಿನ KSRTC ಬಸ್ ನಿಲ್ದಾಣ ಫುಲ್ ರಶ್
, ದಸರಾ ಹಬ್ಬಕ್ಕೆ ಜನರು ತಮ್ಮ ಊರುಗಳಿಗೆ ಹೊರಟಿದ್ದು, ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಟರ್ಮಿನಲ್ 1, 2, 3 ರ ತುಂಬಾ ಪ್ರಯಾಣಿಕರು ತುಂಬಿಕೊಂಡಿದ್ದು, ಬಸ್ ಸೀಟ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಕೆಲವರು ಕಿಟಕಿಗಳ ಮೂಲಕ ಬ್ಯಾಗ್ಗಳನ್ನು ಹಾಕಿ ಸೀಟ್ ಹಿಡಿಯುತ್ತಿದ್ದಾರೆ.
ಬೆಂಗಳೂರು, ಅ.10: ದಸರಾ ಹಬ್ಬದ ಹಿನ್ನಲೆ ಸಾಲು ಸಾಲು ರಜೆಯಿದ್ದು, ಜನರು ಊರುಗಳತ್ತ ತೆರಳುತ್ತಿದ್ದಾರೆ. ಇದರಿಂದ ಬೆಂಗಳೂರಿನ ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣ ತುಂಬಿ ತುಳುಕುತ್ತಿದೆ. ಹೌದು, ದಸರಾ ಹಬ್ಬಕ್ಕೆ ಜನರು ತಮ್ಮ ಊರುಗಳಿಗೆ ಹೊರಟಿದ್ದು, ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಟರ್ಮಿನಲ್ 1, 2, 3 ರ ತುಂಬಾ ಪ್ರಯಾಣಿಕರು ತುಂಬಿಕೊಂಡಿದ್ದು, ಬಸ್ ಸೀಟ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬರುತ್ತಿರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ಫುಲ್ ಆಗುತ್ತಿವೆ. ಹೀಗಾಗಿ ಜನರು ಕಿಟಕಿಗಳ ಮೂಲಕ ಬ್ಯಾಗ್ಗಳನ್ನು ಹಾಕಿ ಸೀಟ್ ಹಿಡಿಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

