ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ; ದೂರು ನೀಡಿದ್ದಕ್ಕೆ ಮಾಲೀಕರಿಂದ ಹಲ್ಲೆ

Updated on: Jan 24, 2025 | 4:09 PM

ಕಾನ್ಪುರದ ಹನುಮಂತ್ ವಿಹಾರ್‌ನ ಅರಾ ಬಿಂಗಾವಾ ಪ್ರದೇಶದಲ್ಲಿ, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಸಾಕು ನಾಯಿ ಕಚ್ಚಿದೆ. ಅವಳು ದೂರು ನೀಡಿದಾಗ ನಾಯಿಯ ಮಾಲೀಕರು ಆಕೆಯ ಮೇಲೆ ದೌರ್ಜನ್ಯ ಎಸಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯ ಲಿಖಿತ ದೂರಿನ ಆಧಾರದ ಮೇಲೆ, ಸ್ಥಳೀಯ ಪೊಲೀಸರು ಗುರುವಾರ ನಾಯಿ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಕಾನ್ಪುರ: ಕಾನ್ಪುರದ ಹನುಮಂತ್ ವಿಹಾರ್‌ನ ಅರಾ ಬಿಂಗಾವಾ ಪ್ರದೇಶದಲ್ಲಿ, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಸಾಕು ನಾಯಿ ಕಚ್ಚಿದೆ. ಪ್ರಾಚಿ ಶುಕ್ಲಾ ಎಂಬ ಮಹಿಳೆ ಜನವರಿ 21ರಂದು ಮಕ್ಕಳನ್ನು ಶಾಲೆಗೆ ಬಿಟ್ಟು ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ನಾರಾಯಣಪುರಿಯ ನಿಮ್ಟೆಕ್ ಕಂಪ್ಯೂಟರ್ ಸೆಂಟರ್ ಬಳಿ ಎದುರಿನಿಂದ ಬರುತ್ತಿದ್ದ ವಾಹನಗಳಿಂದಾಗಿ ಆಕೆ ಸ್ಕೂಟರ್ ನಿಲ್ಲಿಸಬೇಕಾಯಿತು. ಆಗ ಜಯಪಾಲ್ ಸಿಂಗ್ ಅವರ ಸಾಕು ನಾಯಿ ಆಕೆಯ ಎರಡೂ ಕಾಲುಗಳನ್ನು ಕಚ್ಚಿತು, ಇದರಿಂದಾಗಿ ಅವರು ಬಿದ್ದು ಗಾಯಗೊಂಡರು.

ಈ ಘಟನೆಯ ಬಗ್ಗೆ ಜಯಪಾಲ್ ಅವರನ್ನು ಕೇಳಿದಾಗ ಅವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಯಪಾಲ್ ಅವರ ಸಾಕು ನಾಯಿ ಮನುಷ್ಯರ ಮೇಲೆ ದಾಳಿ ಮಾಡಿದ್ದು ಇದೇ ಮೊದಲಲ್ಲ. ಸ್ಥಳೀಯರು ಈ ನಾಯಿ ಈ ಹಿಂದೆಯೂ 2ರಿಂದ 3 ಜನರಿಗೆ ಕಚ್ಚಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More