AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

G20 Summit: ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ಮುಂದುವರಿಸಿದ ಇನ್​ಸ್ಪೆಕ್ಟರ್​​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ

G20 Summit: ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ಮುಂದುವರಿಸಿದ ಇನ್​ಸ್ಪೆಕ್ಟರ್​​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ

Rakesh Nayak Manchi
Rakesh Nayak Manchi|

Updated on: Sep 23, 2023 | 7:02 PM

Share

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್​ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಸೆ.23: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ (G20 Summit 2023) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇನ್​ಸ್ಪೆಕ್ಟರ್ ಅವರಲ್ಲಿ ಅನುಭವ ಹಂಚಿಕೊಳ್ಳಲು ಹೇಳಿದಾಗ ತಾಯಿ ಕಳೆದುಕೊಂಡ ದುಃಖದ ನಡುವೆ ಕರ್ತವ್ಯ ನಿರ್ವಹಿಸಿದ್ದನ್ನು ಹೇಳಿಕೊಂಡರು. ಇವರ ಕರ್ತವ್ಯ ನಿಷ್ಠೆಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತ್ ಮಂಟಪದ ಮೀಟಿಂಗ್ ರೂಮ್​ನಲ್ಲಿ ಭದ್ರತಾ ನಿರ್ವಹಣೆ ಮಾಡಿದ ಇನ್​ಸ್ಪೆಕ್ಟರ್ ಸುರೇಶ್ ಕುಮಾರ್ ಅವರ ಬಳಿ ಅನುಭವ ಹಂಚಿಕೊಳ್ಳಲು ಮೋದಿ ಹೇಳಿದ್ದಾರೆ. ಈ ವೇಳೆ ಸುರೇಶ್, ಗರ್ವದಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಈ ಕಾರ್ಯಕ್ರಮ ಒಂದು ದೊಡ್ಡ ಅನುಭವ ಆಗಿದೆ. ಆದರೆ ಕರ್ತವ್ಯದಲ್ಲಿದ್ದಾಗ ನನ್ನ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ನಡುವೆ ತಾನು ಕರ್ತವ್ಯ ಮುಂದುವರಿಸಿದ್ದಾಗಿ ಹೇಳಿದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಗಟ್ಟಿ ಮನಸು ಮಾಡಿ ಕರ್ತವ್ಯದಲ್ಲಿ ತೊಡಗಿಕೊಂಡಿದ್ದೀರಿ. ದಃಖದ ನಡುವೆ ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೀರಿ. ಸುರೇಶ್​​ಜೀ ನಿಮಗೆ ಧನ್ಯವಾದಗಳು ಎಂದು ಮೋದಿ ಹೇಳಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.