Delhi Assembly Poll Results: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಸ್ವರೂಪ ಬದಲಾಯಿಸಿ ನಿಜಾರ್ಥದಲ್ಲಿ ಹೊಸದೆಹಲಿ ಮಾಡಲಿದ್ದಾರೆ: ವಿ ಸೋಮಣ್ಣ
ದೆಹಲಿ ಜನರಿಗೆ ಪ್ರಧಾನಿ ಮೋದಿಯವರ ಕಾರ್ಯವೈಖರಿ ಇಷ್ಟವಾಗಿದೆ, ಅಣ್ಣಾ ಹಜಾರೆ ಆಂದೋಲನದ ಮೂಲಕ ಮುನ್ನೆಲೆಗೆ ಬಂದು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಅವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ, ಪ್ರಧಾನಿ ಮೋದಿಯವರು ಸರ್ವರಿಗೂ ಸಮಾನ ಆಧದ್ಯತೆಯನ್ನು ನೀಡಲಿದ್ದಾರೆ, ದೇಶದ ರಾಜಧಾನಿಯನ್ನು ಮೇಲ್ಪಂಕ್ತಿಗೆ ಏರಿಸಲಿದ್ದಾರೆ ಎಂದು ಸೋಮಣ್ಣ ಹೇಳಿದರು.
ತುಮಕೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಕರ್ನಾಟಕದ ಕೇಂದ್ರ ಸಚಿವ ವಿ ಸೋಮಣ್ಣ ಅವರದ್ದು ದೊಡ್ಡದಲ್ಲದಿದ್ದರೂ ಚಿಕ್ಕ ಪಾತ್ರವಿದೆ. ತುಮಕೂರುನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸೋಮಣ್ಣ ತನಗೆ ನಾಗ್ಲೋಯಿ ವಿಧಾನಸಭಾ ಕ್ಷೇತ್ರದ ಉಸ್ತವಾರಿ ವಹಿಸಲಾಗಿತ್ತು, ಗೊತ್ತಿರುವಷ್ಟು ಹಿಂದಿಯಲ್ಲೇ ನೂರಿನ್ನೂರು ಜನರನ್ನು ಸೇರಿಸಿ ಸಭೆ ಮಾಡುತ್ತಾ ದಿನಕ್ಕೆ 8-10 ತಾಸು ಕೆಲಸ ಮಾಡುತ್ತಿದ್ದೆ, ಪುಣ್ಕಕ್ಕೆ ಅಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಶೋಕೀನ್ ಗೆದ್ದಿದ್ದಾರೆ ಎಂದು ಸೋಮಣ್ಣ ಹೇಳಿದರು. ಪಕ್ಷದ ಗೆಲುವಿನ ಸಿಂಹಪಾಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಅವರು ರಾಷ್ಟ್ರದ ರಾಜಧಾನಿಯ ಸ್ವರೂಪವನ್ನೇ ಬದಲಿಸಲಿದ್ದಾರೆ ಎಂದು ಸೋಮಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Delhi Assembly Poll Results; ಸಮಾಜದ ಎಲ್ಲ ವರ್ಗದವರು ಬಿಜೆಪಿಗೆ ವೋಟು ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ